ADVERTISEMENT

ಕಾಂತಾರ ಬಗ್ಗೆ ಬಹಿರಂಗ ಪತ್ರ ಬರೆದ ಸುದೀಪ್: ಚಿತ್ರದ ಬಗ್ಗೆ ಅವರ ಅಭಿಪ್ರಾಯವೇನು?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 14:18 IST
Last Updated 8 ಅಕ್ಟೋಬರ್ 2022, 14:18 IST
ನಟ ಸುದೀಪ್‌
ನಟ ಸುದೀಪ್‌    

ಇತ್ತೀಚೆಗಷ್ಟೆ ಬಿಡುಗಡೆಯಾದ, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಪಡೆದಿರುವ ಕಾಂತಾರ ಸಿನಿಮಾ ಮತ್ತು ಚಿತ್ರ ತಂಡವನ್ನು ನಟ ಕಿಚ್ಚ ಸುದೀಪ್‌ ಶನಿವಾರ ಕೊಂಡಾಡಿದ್ದಾರೆ.

ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಅವರು, ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.

ನನ್ನನ್ನು ಈ ಪತ್ರ ಬರೆಯುವಂತೆ ಮಾಡಿದ ತಂಡಕ್ಕೆ...

ADVERTISEMENT

ನಾವು ಉತ್ತಮವಾದ ಮತ್ತು ಅದ್ಭುತವಾದ ಚಲನಚಿತ್ರಗಳನ್ನು ವೀಕ್ಷಿಸುತ್ತಿರುತ್ತೇವೆ. ಆದರೆ ಅಪರೂಪಕ್ಕೆಂಬಂತೆ ಒಂದೊಂದು ಸಿನಿಮಾ ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

"ಕಾಂತಾರ" ಅಂಥದ್ದೇ ಒಂದು ಚಿತ್ರ. ಅದು ದೊಡ್ಡ ಪ್ರಭಾವವನ್ನು ಬೀರಿದೆ. ಸರಳವಾದ ಕಥಾವಸ್ತು. ಅದನ್ನು ಅಸಾಧಾರಣವಾಗಿ ಬರೆಯಲಾಗಿದೆ, ಅದ್ಭುತವಾಗಿ ನಿರೂಪಿಸಲಾಗಿದೆ. ರಿಷಬ್ ಅವರಿಂದ ಅದ್ಭುತ ಪ್ರದರ್ಶನ ಮೂಡಿ ಬಂದಿದೆ. ಈ ರೀತಿಯದ್ದನ್ನು ಯಾರಾದರೊಬ್ಬರು ಯೋಚಿಸಲು ಹೇಗೆ ಸಾಧ್ಯ ಎಂದು ಅಚ್ಚರಿಪಡುವುದಷ್ಟೇ ನಮ್ಮ ಕೆಲಸ. ಈ ಕಥಾವಸ್ತುವು ಪರದೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ. ಕ್ಲೈಮ್ಯಾಕ್ಸ್ ಕೂಡ... ಇದೇನಾದರೂ ಬರಿ ಕಾಗದದ ಮೇಲೆಯೇ ಉಳಿದುಹೋಗಿದ್ದರೆ, ಅದೊಂದು ಕತೆಯಷ್ಟೇ ಆಗಿರುತ್ತಿತ್ತು. ಇದು ನಿರ್ದೇಶಕರೊಬ್ಬರ ಕಲ್ಪನೆ. ಅವರ ಕೆಲಸವು ಚಪ್ಪಾಳೆಗೆ ಅರ್ಹವಾಗಿದೆ. ಇಂಥದ್ದೊಂದು ಕಥಾಹಂದರದ ಮೇಲೆ ನಂಬಿಕೆ ಇರಿಸಿದ ತಂಡಕ್ಕೆ ಅಭಿನಂದನೆಗಳು. ಈ ಸಿನಿಮಾ ನಿರ್ಮಿಸಿದ ಸೃಜನಶೀಲ ತಂಡಕ್ಕೆ ಮತ್ತು ರಿಷಬ್‌ಗೆ ನನ್ನ ಅಪ್ಪುಗೆ.
ಹ್ಯಾಟ್ಸ್ ಆಫ್ ಅಜನೀಶ್... ನೀವು ನಿಜಕ್ಕೂ ಮಾಸ್ಟರ್. ಕಥೆಯ ಮೇಲೆ ವಿಶ್ವಾಸವಿಟ್ಟ, ಅದರ ಪರವಾಗಿ ನಿಂತ ‘ಹೊಂಬಾಳೆ’ಗೆ ಅಭಿನಂದನೆಗಳು.

ನಾನು ಚಿತ್ರ ವೀಕ್ಷಿಸಲು ಹಿಂದೆ ಕುಳಿತುಕೊಂಡೆ. ನನಗೆ ಕೇಳಿಬರುತ್ತಿದ್ದ ಅಭಿಪ್ರಾಯಗಳನ್ನು ಗಮನಿಸಿದರೆ, ಚಿತ್ರ ಗೆಲ್ಲಲಿದೆ ಎಂದು ಭಾವಿಸುತ್ತೇನೆ. ಹೇಳಲೇಬೇಕಾದ್ದದ್ದು... ಚಿತ್ರವು ಎಲ್ಲವನ್ನೂ ಮೀರಿಸಿದೆ.

ಕಿಚ್ಚಾ...

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.