‘ಕೆಜಿಎಫ್ ಚಾಪ್ಟರ್ 1’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಹಿಂದೆ ಈ ವಿಷಯದ ಬಗ್ಗೆ ಟಾಲಿವುಡ್ ಅಂಗಳದಲ್ಲಿ ವ್ಯಾಪಕ ಚರ್ಚೆಯೂ ನಡೆದಿತ್ತು.
ಈ ನಡುವೆ ಸೂಪರ್ಸ್ಟಾರ್ ಮಹೇಶ್ ಬಾಬು ಪತ್ನಿ ನಮೃತಾ ಮೈತ್ರಿ ಮೂವೀಸ್ ಬ್ಯಾನರ್ನೊಂದಿಗೆಸಿನಿಮಾ ನಿರ್ಮಾಣ ಮಾಡುವ ಸಲುವಾಗಿ ಪ್ರಶಾಂತ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿಯೂ ಕೇಳಿಬಂದಿತ್ತು.
ಆದರೆ ಸದ್ಯದ ಸುದ್ದಿಯ ಪ್ರಕಾರ ಪ್ರಶಾಂತ್ ನೀಲ್ ಅವರು ನಟ ಜ್ಯೂನಿಯರ್ ಎನ್ಟಿಆರ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ.ಅಲ್ಲದೇ ಪ್ರಶಾಂತ್, ಎನ್ಟಿಆರ್ ಜೊತೆ ಕೆಲಸ ಮಾಡಲು ತುಂಬಾನೇ ಉತ್ಸುಕರಾಗಿದ್ದಾರಂತೆ.
ಕೆಜಿಎಫ್ ರೂವಾರಿಯ ಈ ಚಿತ್ರವು ಎನ್ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವೀಸ್ ಸಹಯೋಗದೊಂದಿಗೆ ನಿರ್ಮಾಣವಾಗಲಿದೆ. ಸದ್ಯಕ್ಕೆ ಯಂಗ್ ಟೈಗರ್ ‘ಆರ್ಆರ್ಆರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಂತರ ತಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ನಂತರ ಪ್ರಶಾಂತ್ ಅಡ್ಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ಟಿಆರ್.
‘ಕೆಜಿಎಫ್ ಭಾಗ –1’ ರ ನಂತರ ಪ್ರಶಾಂತ್ಗೆ ಬೇಡಿಕೆ ಹೆಚ್ಚಿದ್ದು ಮಹೇಶ್ ಬಾಬು ಇವರೊಂದಿಗೆ ಕೆಲಸ ಮಾಡಲು ಇಚ್ಚಿಸಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.
ರಾಜಮೌಳಿ, ತಿವಿಕ್ರಮ್ ಹಾಗೂ ಪ್ರಶಾಂತ್ ನೀಲ್ರಂತಹ ಸ್ಟಾರ್ ನಿರ್ದೇಶಕರ ಲಿಸ್ಟ್ನಲ್ಲಿ ಎನ್ಟಿಆರ್ ಹೆಸರಿದೆ.ಅಲ್ಲದೇ ನಿರ್ದೇಶಕ ಕೊರಟಾಲ ಶಿವ ಕೂಡ ತಮ್ಮ ಕಥೆಗೆ ಎನ್ಟಿಆರ್ ಡೇಟ್ಗಾಗಿ ಕಾಯುತ್ತಿದ್ದಾರಂತೆ.
ಅಷ್ಟೇ ಅಲ್ಲದೇ ಈಗ ಎನ್ಟಿಆರ್ ಕೈಯಲ್ಲಿರುವ ಪ್ರತಿ ಚಿತ್ರಕ್ಕೂ ಎನ್ಟಿಆರ್ ಆರ್ಟ್ಸ್ ಸಂಸ್ಥೆ ಪಾಲುದಾರಿಕೆ ಹೊಂದಿದೆ ಎಂಬ ಸುದ್ದಿಯೂ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.