ADVERTISEMENT

PHOTOS | ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದಲ್ಲಿ ತಾರೆಯರ ಸಮಾಗಮ

ಪ್ರಜಾವಾಣಿ ವಿಶೇಷ
Published 5 ಜೂನ್ 2023, 9:22 IST
Last Updated 5 ಜೂನ್ 2023, 9:22 IST
ಹಿರಿಯ ನಟ ಅನಂತನಾಗ್ ಅವರಿಗೆ ಕನ್ನಡ ಸಿನಿ ಸಮ್ಮಾನ -2023 ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಗೌರವಿಸಿದರು. ನಟ ರಮೇಶ್ ಅರವಿಂದ್ ಜೊತೆಗಿದ್ದರು.
ಹಿರಿಯ ನಟ ಅನಂತನಾಗ್ ಅವರಿಗೆ ಕನ್ನಡ ಸಿನಿ ಸಮ್ಮಾನ -2023 ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿ ಗೌರವಿಸಿದರು. ನಟ ರಮೇಶ್ ಅರವಿಂದ್ ಜೊತೆಗಿದ್ದರು.   

ಬೆಂಗಳೂರು: ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ವೇದಿಕೆ ಮೇಲೆ ನಿಂತಿದ್ದ ಗಣ್ಯರು ‘ಪ್ರಜಾವಾಣಿ’ಯ ಚೊಚ್ಚಲ ಸಿನಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಘೋಷಿಸುತ್ತಿದ್ದಂತೆ ಸಿನಿ ಪ್ರೇಮಿಗಳ ಚಪ್ಪಾಳೆ ಮುಗಿಲುಮುಟ್ಟಿತ್ತು.

ನಟ ರಮೇಶ್ ಅರವಿಂದ್ ಹಾಗೂ ಸಹ ನಿರೂಪಕಿ ಅನುಶ್ರೀ ಅವರು ‌ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಾಹಿತಿ ಚಂದ್ರಶೇಖರ ಕಂಬಾರ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎನ್. ಸೀತಾರಾಮ್, ನಟಿ ಪೂಜಾ ಗಾಂಧಿ, ಗಾಯಕಿ ಎಂ.ಡಿ. ಪಲ್ಲವಿ, ಹಿರಿಯ ನಟಿ ಬಿ. ಜಯಶ್ರೀ ಮೊದಲಾದರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಹಲವು ನಟ, ನಟಿಯರು, ತಂತ್ರಜ್ಞರು, ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ನೂರಾರು ನಟ–ನಟಿಯರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ADVERTISEMENT
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಕಾಂತಾರ’ ಚಿತ್ರ ತಂಡಕ್ಕೆ ಪ್ರಶಸ್ತಿ ನೀಡಿ ಅಭಿನಂದಿಸಿದರು.
ಗಾನವಿ ಲಕ್ಷ್ಮಣ್ ಅವರು ಅತ್ಯುತ್ತಮ‌ ನಟಿ ಪ್ರಶಸ್ತಿ ಪಡೆದರು.
ಕಾಂತಾರ ಚಿತ್ರಕ್ಕೆ ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ದೊರೆಯಿತು
ಕಾಂತಾರ ಸಿನಿಮಾಗೆ ಜನ ಮೆಚ್ಚಿದ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆಯಿತು.
ಅಜನೀಶ್‌ ಲೋಕನಾಥ್ ಅವರು ಜನ ಮೆಚ್ಚಿದ ಸಂಗೀತ ಪ್ರಶಸ್ತಿ ಪಡೆದರು.
ಅಜನೀಶ್‌ ಲೋಕನಾಥ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.
ಕಿರಣ್ ರಾಜ್ ಕೆ. ಅವರು ಅತ್ಯುತ್ತಮ ಚೊಚ್ಚಲ ನಿರ್ದೇಶನ ಪುಶಸ್ತಿ ಪಡೆದರು
ಕಿಶೋರ್ ಕುಮಾರ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಉಮಾಶ್ರೀ ಅವರಿಗೆ ಅತ್ಯುತ್ತಮ‌ ಷೋಷಕ ನಟಿ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಗಾಯಕಿ ಎಂ.ಡಿ. ಪಲ್ಲವಿ ಅವರು ಕೆ. ಕಲ್ಯಾಣ್ ಅವರಿಗೆ ಅತ್ಯುತ್ತಮ ಗೀತಾ ರಚನೆಕಾರ ಪ್ರಶಸ್ತಿ ಪ್ರದಾನ ಮಾಡಿದರು.
ಸಿದ್ ಶ್ರೀರಾಮ್ ಅವರು ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಪಡೆದರು.
777 ಚಾರ್ಲಿ ಸಿನಿಮಾಕ್ಕೆ ಆ್ಯನಿಮೇಷನ್ ಪ್ರಶಸ್ತಿ
ಅತ್ಯುತ್ತಮ ನಟ ವಿಭಾಗದಲ್ಲಿ ದಿ. ಸಂಚಾರಿ ವಿಜಯ್‌ಗೆ ಪ್ರಶಸ್ತಿ ನೀಡಲಾಯಿತು. ವಿಜಯ್ ಪರವಾಗಿ ಮನೆಯವರು ಪ್ರಶಸ್ತಿ ಸ್ವೀಕರಿಸಿದರು
ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್‌ ಅವರಿಗೆ ದೃಶ್ಯ ಹಾಗೂ ನುಡಿನಮನ ಸಲ್ಲಿಸಲಾಯಿತು.
ನಾಗೇಂದ್ರ ಪ್ರಸಾದ್ ಅವರಿಗೆ ಅತ್ಯುತ್ತಮ ಸಂಕಲನ ಪ್ರಶಸ್ತಿ ನೀಡಲಾಯಿತು
ಅರ್ಜುನ್ ಜನ್ಯರಿಂದ ಸಂಗೀತ ಸುಧೆ
ನಟಿ ಭಾವನಾ ರಾವ್ ಅವರಿಂದ ನೃತ್ಯ ಪ್ರದರ್ಶನ
ನಟಿ ಸಾನ್ವಿ ಶ್ರೀವತ್ಸವ್ ಅವರಿಂದ ನೃತ್ಯ ಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.