ಬೆಂಗಳೂರು: ನಟ ಶ್ರೀಮುರಳಿ ಅವರಿಗಾಗಿ ‘ಉಗ್ರಂ 2’ ಸಿನಿಮಾ ನಿರ್ದೇಶಿಸುತ್ತೇನೆ ಎಂದುಪ್ರಶಾಂತ್ ನೀಲ್ ತಿಳಿಸಿದರು.
ತಮ್ಮ ಸಿನಿಮಾ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.
ಸದ್ಯ ‘ಕೆಜಿಎಫ್ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಮುಗಿದ ಬಳಿಕ‘ಉಗ್ರಂ 2’ ನಿರ್ದೇಶಿಸುತ್ತೇನೆಯೇ ಎಂಬುದು ನನಗಂತೂ ಗೊತ್ತಿಲ್ಲ. ಆದರೆ, ಅವರಿಗಾಗಿ ಆ ಸಿನಿಮಾ ನಿರ್ದೇಶಿಸುವುದು ನಿಶ್ಚಿತ ಎಂದಿದ್ದಾರೆ.
ಐದೂವರೆ ವರ್ಷದ ಹಿಂದೆ ತೆರೆಕಂಡ ‘ಉಗ್ರಂ’ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ನಟರಾದ ಶ್ರೀಮುರಳಿ, ತಿಲಕ್, ಶರತ್, ರಣತುಂಗ, ನಟಿ ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.