ADVERTISEMENT

ಹೂವಿನ‌ ಪಲ್ಲಕ್ಕಿಯಲ್ಲಿ ಪುನೀತ್ ಪಾರ್ಥಿವ ಶರೀರ, ಈಡಿಗ ಸಂಪ್ರದಾಯದಂತೆ ವಿಧಿವಿಧಾನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 1:43 IST
Last Updated 31 ಅಕ್ಟೋಬರ್ 2021, 1:43 IST
ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ಅಂತಿಮ ವಿಧಿವಿಧಾನ
ಕಂಠೀರವ ಸ್ಟುಡಿಯೊದಲ್ಲಿ ಪುನೀತ್ ಅಂತಿಮ ವಿಧಿವಿಧಾನ   

ಬೆಂಗಳೂರು: ಅಂತ್ಯ ಸಂಸ್ಕಾರದ ವೇಳೆ ಪುನೀತ್ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಇಟ್ಟು ವಿಧಿ ವಿಧಾನ ಪೂರೈಸಲಾಯಿತು.

ಈ ದೃಶ್ಯ ಕಂಡು ಪುನೀತ್ ಪತ್ನಿ ಅಶ್ವಿನಿ ರೋಧಿಸುತ್ತಿದ್ದರು. ಪುತ್ರಿ ಧೃತಿ, ಅಮ್ಮ ಹಾಗೂ ತಂಗಿಯ ಕೈಗಳನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದರು.

ಬಳಿಕ ಮೂವರೂ ಪುನೀತ್ ಮೃತದೇಹ ಇರಿಸಲಾಗಿದ್ದ ಪಲ್ಲಕ್ಕಿಯನ್ನು ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರು.

ADVERTISEMENT

ಇದಕ್ಕೂ ಮುನ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಮುತ್ತಿಟ್ಟು ಭಾವುಕರಾದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಪುನೀತ್ ಪತ್ನಿ ಅಶ್ವಿನಿ, ಪುತ್ರಿಯರಾದ ಧೃತಿ ಹಾಗೂ ವಂದಿತಾಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.