ಚಿತ್ರ ಕೃಪೆ: divyaspandana
ಖ್ಯಾತ ಲೇಖಕಿ ರಾಜಲಕ್ಷ್ಮಿ ಎನ್. ರಾವ್ ಅವರ ಕಥಾಲೋಕ ಕಾರ್ಯಕ್ರಮದಲ್ಲಿ ಧರ್ಮಗ್ರಂಥಗಳು, ಧ್ಯಾನ, ವಿಧಿ ಆಧ್ಯಾತ್ಮದ ಬಗ್ಗೆ ನಟಿ ರಮ್ಯಾ ಅವರು ಬರಹಗಾರ್ತಿಯೊಂದಿಗೆ ಸಂವಾದ ನಡೆಸಿದರು.
ರಮ್ಯಾ ಅವರು ಈ ಕಾರ್ಯಕ್ರಮದಲ್ಲಿ ಶಾಸ್ತ್ರ, ಉಪದೇಶಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲೇಖಕಿ ಅವರಲ್ಲಿ ಕೇಳಿದ್ದಾರೆ. ರಾಜಲಕ್ಷ್ಮಿ ಅವರು ತಮ್ಮದೇ ಶೈಲ್ಲಿಯಲ್ಲಿ ಉತ್ತರಿಸಿದ್ದಾರೆ.
ಈ ಬಗ್ಗೆ ನಟಿ ರಮ್ಯಾ ಅವರು ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲೇಖಕಿ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿತು. ಅವರಿಂದ ನನಗೆ ನಿಜವಾಗಿಯೂ ಸ್ಫೂರ್ತಿ ಸಿಕ್ಕಿತು.
ಲೇಖಕಿ ರಾಜಲಕ್ಷ್ಮಿ ಎನ್.ರಾವ್ ಅವರೊಂದಿಗಿನ ಸಂವಾದ ಖುಷಿ ನೀಡಿದೆ ಎಂದು ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಕಥಾಲೋಕ ಕುರಿತ ನಟಿ ರಮ್ಯಾ ಅಭಿಮಾನಿಗಳು ಹಾಗೂ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.