ಅಶ್ವಿನಿ ಎಸ್.ಎನ್, ಕಿಚ್ಚ ಸುದೀಪ್, ಮಂಜು ಭಾಷಿಣಿ
ಬಿಗ್ಬಾಸ್ ಮನೆಯಿಂದ ಮೂರನೇ ವಾರಕ್ಕೆ ಮಂಜು ಭಾಷಿಣಿ ಹಾಗೂ ಅಶ್ವಿನಿ ಎಸ್.ಎನ್ ತಮ್ಮ ಆಟವನ್ನು ಮುಗಿಸಿ ಹೊರ ಬಂದಿದ್ದರು. ಬಿಗ್ಬಾಸ್ನಿಂದ ಎಲಿಮಿನೇಟ್ ಆಗಿ ಹೊರಬಂದ ಕೂಡಲೇ ಕಿಚ್ಚ ಸುದೀಪ್ ಜೊತೆಗೆ ಇಬ್ಬರು ಮಾತನಾಡಿದ್ದಾರೆ.
ಕಳೆದ ಸಂಚಿಕೆಯಲ್ಲಿ (ಶನಿವಾರ) ಅಭಿಷೇಕ್, ಅಶ್ವಿನಿ ಎಸ್,ಎನ್, ಸ್ಪಂದನಾ ಸೋಮಣ್ಣ ಮತ್ತು ಮಂಜು ಭಾಷಿಣಿ ಡೇಂಜರ್ ಝೋನ್ನಲ್ಲಿದ್ದರು. ಇವರ ಪೈಕಿ ಅಶ್ವಿನಿ ಎಸ್.ಎನ್ ಮತ್ತು ಮಂಜು ಭಾಷಿಣಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಹೊರ ಬಂದಿದ್ದ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆ ಮಾತನಾಡಿದ್ದಾರೆ. ಈ ವೇಳೆ ಸುದೀಪ್ ಅವರು ಈ ಇಬ್ಬರಿಗೂ ಪ್ರಶ್ನೆ ಒಂದನ್ನು ಕೇಳಿದ್ದಾರೆ. ‘ನಿಮ್ಮ ಪ್ರಕಾರ ಫಿನಾಲೆ ತಲುಪುವ ಅರ್ಹತೆ ಇರುವ ಸ್ಪರ್ಧಿ ಯಾರು’ ಎಂದು ಕೇಳಿದ್ದಾರೆ. ಅದಕ್ಕೆ ಇಬ್ಬರು 'ಗಿಲ್ಲಿ' ಎಂದು ಉತ್ತರಿಸಿದ್ದಾರೆ. ಅಚ್ಚರಿ ಏನೆಂದರೆ ಈ ಇಬ್ಬರು ಒಂದೇ ಬಾರಿಗೆ ‘ಗಿಲ್ಲಿ ನಟ ಸರ್’ ಎಂದು ಹೇಳಿದ್ದಾರೆ. ಈ ಇಬ್ಬರ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ನಟ ತಮಾಷೆ ಮಾಡಿಕೊಂಡು, ಎಲ್ಲರಿಗೂ ತಿರುಗೇಟು ಕೊಡುತ್ತಿದ್ದಾರೆ. ಹಾಗೇ ತಪ್ಪು ನಡೆದ ಕಡೆ ಧ್ವನಿ ಎತ್ತುತ್ತಿದ್ದಾರೆ. ಗಿಲ್ಲಿ ನಟನ ಕಾಮಿಡಿ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಗಿಲ್ಲಿ ನಟ ಹೇಗೆ ಟಾಸ್ಕ್ ಆಡುತ್ತಾರೆ ಎಂದು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.