ಬೆಂಗಳೂರು: ಕನ್ನಡ ಧಾರಾವಾಹಿ 'ಬ್ರಹ್ಮಗಂಟು'ನ ಗುಂಡಮ್ಮ ಖ್ಯಾತಿಯ ಗೀತಾ ಅವರು ಈ ಬಾರಿಯ ಬಿಗ್ ಬಾಸ್ ಮನೆ ಸೇರಿಕೊಂಡರು.
ಮೂಲತಃ ಕಾರ್ಕಳದವರಾದ ಗೀತಾ ಭಾರತಿ ಭಟ್ ತಾವು ಸ್ಥೂಲಕಾಯದವರಾಗಿದ್ದರ ಹಿಂದಿನ ಕತೆಯನ್ನು ಬಿಗ್ಬಾಸ್ ವೇದಿಕೆಯಲ್ಲಿ ಹೇಳಿಕೊಂಡರು. ತಮ್ಮನ್ನು ಜನ ಆಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ತಾವು ದಪ್ಪಗಿರುವುದೇ ತಮಗೆ ಪೂರಕವಾಗಿದೆ ಎಂದೂ ಅವರು ಹೇಳಿದ್ದಾರೆ.
ನಾನು ತೀರ ಭಾವುಕಳು. ಅತ್ತರೆ ಜಾಸ್ತಿ ಅಳುತ್ತೇನೆ, ನಕ್ಕರೆ ಜಾಸ್ತಿ ಅಳುತ್ತೇನೆ ಎಂದು ತಮ್ಮ ವಿವರವುಳ್ಳ ವಿಡಿಯೊದಲ್ಲಿ ಹೇಳಿಕೊಂಡರು.
ಗಟ್ಟಿಯಾಗಿ ಉಳಿಯಲು ಹೋಗುತ್ತಿದ್ದೇನೆ. ಗಟ್ಟಿಯಾಗಿ ಉಳಿಯುತ್ತೇನೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.