
ನಟಿ ಚೈತ್ರಾ ರೈ
ಚಿತ್ರ: ಇನ್ಸ್ಟಾಗ್ರಾಂ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ಕಲ್ಯಾಣ’ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ರಾಧಾ ಕಲ್ಯಾಣ ಧಾರಾವಾಹಿ ಕಲಾವಿದರಿಗೆ ದೊಡ್ಡ ಹೆಸರನ್ನು ತಂದುಕೊಂಡಿತ್ತು.
ನಟಿ ಚೈತ್ರಾ ರೈ ಅವರು ರಾಧಾ ಕಲ್ಯಾಣದಲ್ಲಿ ವಿಶಾಖ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಮಂಗಳೂರು ಮೂಲದ ನಟಿ ಕನ್ನಡದಲ್ಲಿ ಬೆರಳಿಣಿಕೆಯಷ್ಟು ಧಾರಾವಾಹಿಗಳನ್ನು ಮಾಡಿ ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಅದರಲ್ಲೂ ನಟಿ ಹೆಚ್ಚಾಗಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಚೈತ್ರಾ ಅವರು ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಸದ್ಯ ನಟಿ ಹಾಗೂ ಅವರ ಕುಟುಂಬಸ್ಥರು ಸಂಭ್ರಮದಲ್ಲಿದ್ದಾರೆ.
ಇತ್ತೀಚೆಗೆ ನಟಿ ಚೈತ್ರಾ ರೈ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ನಟಿ ಚೈತ್ರಾ ರೈ ದಂಪತಿ ತಮ್ಮ ಮಗಳ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಜೊತೆಗೆ ಮಗಳ ಹೆಸರನ್ನು ಕಿವಿಯಲ್ಲಿ ಕೂಗಿದ್ದಾರೆ.
ಇನ್ನು, ನಟಿ ಚೈತ್ರಾ ರೈ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಪುಟ್ಟ ಪಾದಗಳು, ದೊಡ್ಡವರಿಂದ ಪಡೆದ ಆಶೀರ್ವಾದ ಮತ್ತು ಪ್ರೀತಿಯಿಂದ ಆರಿಸಲ್ಪಟ್ಟ ಹೆಸರು ಇದು’ ಎಂದು ಬರೆದುಕೊಂಡಿದ್ದಾರೆ.
ನಟಿ ಚೈತ್ರಾ ರೈ ದಂಪತಿ ತಮ್ಮ ಮುದ್ದಾದ ಮಗಳಿಗೆ ‘ಪ್ರಿಷ್ಕಾ’ ಎಂದು ಹೆಸರನ್ನು ಇಟ್ಟು ನಾಮಕರಣ ಮಾಡಿದ್ದಾರೆ. ಪ್ರಿಷ್ಕಾ ಎಂದರೆ, ದೇವರ ಅಮೂಲ್ಯ ಕೊಡುಗೆ, ದೈವಿಕ ಮತ್ತು ಶುದ್ಧ ಆತ್ಮ, ಪ್ರಿಯ, ಆಳವಾಗಿ ಪ್ರೀತಿಸಲ್ಪಡುವವನು ಎಂಬುವುದನ್ನು ಸೂಚಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.