ADVERTISEMENT

ತೇಜಸ್ವಿ ಪ್ರಕಾಶ್‌ಗೆ ಅಭದ್ರತೆ ಕಾಡುತ್ತಿದೆ: ಶಮಿತಾ ಶೆಟ್ಟಿ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2022, 10:42 IST
Last Updated 3 ಫೆಬ್ರುವರಿ 2022, 10:42 IST
ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ   

ಬೆಂಗಳೂರು: ಬಿಗ್ ಬಾಸ್ ಹಿಂದಿ ಸೀಸನ್ 15 ಮುಕ್ತಾಯಗೊಂಡಿದೆ. ಈ ಬಾರಿಯ ವಿನ್ನರ್ ಆಗಿ ತೇಜಸ್ವಿ ಪ್ರಕಾಶ್ ಆಯ್ಕೆಯಾಗಿದ್ದಾರೆ.

ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದ ಶಮಿತಾ ಶೆಟ್ಟಿ ಮತ್ತು ತೇಜಸ್ವಿ ಮಧ್ಯೆ ಆಗಾಗ ಕಲಹ ಸಂಭವಿಸುತ್ತಿತ್ತು. ಬಿಗ್ ಬಾಸ್ ವಿಜೇತರಾಗಿ ತೇಜಸ್ವಿ ಹೊರಹೊಮ್ಮಿರುವ ಬೆನ್ನಲ್ಲೇ, ಶಮಿತಾ ಹೇಳಿಕೆ ನೀಡಿದ್ದು, ತೇಜಸ್ವಿಗೆ ಅಭದ್ರತೆ ಕಾಡುತ್ತಿದೆ ಎಂದಿದ್ದಾರೆ.

ಬಿಗ್ ಬಾಸ್ ಮನೆಯ ಟಾಸ್ಕ್ ಒಂದರಲ್ಲಿ ಭಾಗವಹಿಸಿದ್ದ ಸಂದರ್ಭ ತೇಜಸ್ವಿ ಅವರು, ಶಮಿತಾರನ್ನು ‘ಆಂಟಿ‘ ಎಂದು ಕರೆದಿದ್ದರು. ಶಮಿತಾರಿಗೆ ವಯಸ್ಸಾಗಿದೆ ಎಂಬರ್ಥದಲ್ಲಿ ತೇಜಸ್ವಿ ಆ ಪದ ಬಳಕೆ ಮಾಡಿದ್ದರು.

ADVERTISEMENT

ಆದರೆ ಅಲ್ಲಿ ವಿವಾದ ಉಂಟಾಗುತ್ತಲೇ, ತೇಜಸ್ವಿ ಶಮಿತಾ ಬಳಿ ಕ್ಷಮೆ ಕೇಳಿದ್ದರು.

ತೇಜಸ್ವಿಯನ್ನು ಕ್ಷಮಿಸಿದ್ದೇನೆ, ಆದರೆ ಅವರು ಓರ್ವ ಮಹಿಳೆಯಾಗಿದ್ದುಕೊಂಡು, ಮತ್ತೋರ್ವ ಮಹಿಳೆಯ ಜತೆ ನಡೆದುಕೊಂಡಿರುವ ರೀತಿ ನನಗೆ ನೋವುಂಟು ಮಾಡಿತ್ತು ಎಂದು ಶಮಿತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.