ADVERTISEMENT

ಫ್ಯಾಕ್ಟ್‌ಚೆಕ್‌| ಯೋಗಿ ಹಣೆಗೆ ಹಚ್ಚಿಕೊಂಡಿದ್ದು ಯೋಧನ ಚಿತೆಯ ಬೂದಿಯಲ್ಲ!

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 19:31 IST
Last Updated 31 ಮಾರ್ಚ್ 2022, 19:31 IST
ಫ್ಯಾಕ್ಟ್‌ ಚೆಕ್‌ 
ಫ್ಯಾಕ್ಟ್‌ ಚೆಕ್‌    

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರು ಇರುವ 29 ನಿಮಿಷಗಳ ವಿಡಿಯೊವೊಂದು ವೈರಲ್‌ ಆಗಿದೆ. ಆದಿತ್ಯನಾಥ ಅವರು ಬೂದಿಯನ್ನು ತಮ್ಮ ಹಣೆಗೆ ಹಚ್ಚಿಕೊಳ್ಳುವುದು ಮತ್ತು ಇತರರ ಹಣೆಗೆ ಹಚ್ಚುವುದು ವಿಡಿಯೊದಲ್ಲಿ ಸೆರೆ ಆಗಿದೆ. ಉತ್ತರ ಪ್ರದೇಶದ ಯೋಧರೊಬ್ಬರು ಹುತಾತ್ಮರಾದರು. ಯೋಧನನ್ನು ಸಂಸ್ಕಾರ ಮಾಡಿದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಮೂಲಕ ಯೋಧನಿಗೆ ಅವರು ಗೌರವ ತೋರಿದ್ದಾರೆ.ಯೋಗಿ ಅವರು ಬಹುದೊಡ್ಡ ಸಂತರು ಎಂಬ ಮಾಹಿತಿ ಜೊತೆಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವಿಡಿಯೊ ಜೊತೆ ಹಂಚಿಕೊಳ್ಳುತ್ತಿರುವ ಮಾಹಿತಿಯು ಸುಳ್ಳು ಎಂದು ದಿ ಲಾಜಿಕಲ್‌ ಇಂಡಿಯನ್‌ ವೇದಿಕೆ ವರದಿ ಮಾಡಿದೆ. ಈ ವಿಡಿಯೊವನ್ನು ಪ್ರಾಚಿ ಸಾಧ್ವಿ ಅವರು ಟ್ವೀಟ್‌ ಮಾಡಿದ್ದಾರೆ. ‘ನಮ್ಮ ಸನಾತನ ಧರ್ಮದಲ್ಲಿ ಹೋಲಿಕಾ ದಹನದ ಬೂದಿಯನ್ನು ಹಣೆಗೆ ಹಚ್ಚಿದರೆ ದೇಹ ತಂಪಾಗುತ್ತದೆ’ ಎಂದು ಅವರು ವಿಡಿಯೊಗೆ ಅಡಿ ಬರಹ ನೀಡಿದ್ದಾರೆ. ಯೋಗಿ ಅವರು ಗೋರಖಪುರದಲ್ಲಿ ನರಸಿಂಹ ಉತ್ಸವದಲ್ಲಿ ಪಾಲ್ಗೊಂಡು ಬಳಿಕ ಹೋಲಿಕಾ ಬೂದಿಯನ್ನು ಹಣೆಗೆ ಹಚ್ಚಿಕೊಂಡಿದ್ದು ಪ್ರಮುಖ ಸುದ್ದಿ ವಾಹಿನಿಗಳಲ್ಲಿ 2022ರ ಮಾರ್ಚ್‌ 19ರಂದು ವರದಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT