ತಪ್ಪು: ಮದ್ಯದಂಗಡಿ ಬಂದ್ ಆಗಿದ್ದರಿಂದ ಚಿಂತೆಯಾಗಿದೆಯೇ? ಆನ್ಲೈನ್ ಪೇಮೆಂಟ್ ಮಾಡಿದರೆ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡುತ್ತೇವೆ ಎಂಬ ಒಕ್ಕಣೆಯಿರುವ ಜಾಹೀರಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವಾಟ್ಸ್ ಆ್ಯಪ್ನಲ್ಲೂ ಇಂತಹ ಸಂದೇಶಗಳು ಹರಿದಾಡಿ ಭಾರಿ ಸದ್ದು ಮಾಡಿವೆ.
ಸರಿ: ಕೊರೊನಾ ಕಾರಣವಾಗಿ ದೇಶದಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರಿಂದ ಮದ್ಯಪ್ರಿಯರು ಭಾರೀ ಬೇಸರ
ದಲ್ಲಿದ್ದಾರೆ. ಇವರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಹೊಡೆಯಲು ಖದೀಮರು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ನಾಗಪುರದ ವಿಳಾಸವಿದ್ದ ಈ ಮದ್ಯದಂಗಡಿಗಳು ಅಲ್ಲಿನ ಪೊಲೀಸರ ನಿದ್ದೆಗೆಡಿಸಿದ್ದವು. ಆದರೀಗ ಖದೀಮರ ಕಳ್ಳಾಟ ಬಯಲು ಮಾಡಿದ್ದಾರೆ. ಒಡಿಶಾ, ಮಹಾರಾಷ್ಟ್ರದ ಮದ್ಯದಂಗಡಿಗಳಿಗೆ ಒಂದೇ ಸಂಖ್ಯೆಯ ಪೇಮೆಂಟ್ ಲಿಂಕ್ ನೀಡಲಾಗಿದ್ದನ್ನು ಅವರು ಪತ್ತೆ ಮಾಡಿದ್ದಾರೆ. ಇವು ದಾರಿ ತಪ್ಪಿಸುವ ಸಂದೇಶಗಳಾಗಿದ್ದು, ವಂಚನೆಗೆ ಒಳಗಾಗದಿರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ನಕಲಿ ಜಾಹೀರಾತುಗಳ ಸ್ಕ್ರೀನ್ಶಾಟ್ಗಳನ್ನು ಪೊಲೀಸರು ಟ್ವಿಟರ್ನಲ್ಲೂ ಲಗತ್ತಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ನಲ್ಲಿ ಈ ಬಗ್ಗೆ ವರದಿಯಾಗಿದೆ.
ತಪ್ಪು: ಕೋವಿಡ್–19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಸರ್ಕಾರವು ಪಿಂಚಣಿಯನ್ನು ಶೇ 30ರಷ್ಟು ಕಡಿತಗೊಳಿಸಲಿದೆ ಹಾಗೂ 80 ವರ್ಷ ಮೀರಿದವರಿಗೆ ಪಿಂಚಣಿ ಸ್ಥಗಿತಗೊಳಿಸಲಿದೆ
ಎಂಬ ಸುದ್ದಿ ಹರಿದಾಡಿತ್ತು.
ಸರಿ: ಕೇಂದ್ರ ಸರ್ಕಾರದ ಪಿಐಬಿ ಈ ಸಂಬಂಧ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದೆ. ‘ಸರ್ಕಾರವು ಪಿಂಚಣಿ ಕಡಿತ ಮಾಡಲಿದೆ ಎಂಬ ಸುದ್ದಿ ನಿರಾಧಾರ. ಇದು ತಳಬುಡವಿಲ್ಲದ ಸುದ್ದಿ’ ಎಂದು ತಿಳಿಸಿದೆ. ಪಿಐಬಿ ಸ್ಪಷ್ಟನೆಗೆ ಹಲವರು ಧನ್ಯವಾದ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.