ADVERTISEMENT

ದೆಹಲಿ ಪರ್ಯಾಯ ಸರ್ಕಾರ ರಚನೆ ಕುರಿತು ‘ಸುಪ್ರೀಂ’ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ‘ದೆಹಲಿ­ಯಲ್ಲಿ ಪರ್ಯಾಯ ಸರ್ಕಾರ ರಚನೆಯ ಸಾಧ್ಯತೆಯನ್ನು ಪರಿಶೀಲಿ­ಸಲು  ಸಿದ್ಧರಿರಲಿಲ್ಲವೇ?’ ಎಂದು ಪ್ರಶ್ನಿಸಿ ಸುಪ್ರೀಂ­ ಕೋರ್ಟ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿದ್ದು, ಶಾಸನಸಭೆ­ಯಲ್ಲಿ­ರುವ ಬೇರೆ ಪಕ್ಷಗಳು ಪಕ್ಷಾಂತರ ಮಾಡುವ ಸಾಧ್ಯತೆ ಇದ್ದುದ್ದರಿಂದ ದೆಹಲಿ ವಿಧಾನಸಭೆಯನ್ನು ವಿಸರ್ಜಿ­ಸದೇ ಅಮಾನತಿನಲ್ಲಿಡ­ಲಾಯಿತೇ? ಎಂದು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಪ್ರಶ್ನಿಸಿದೆ.

ಒಮ್ಮೆ ವಿಧಾನಸಭೆಯನ್ನು ಅಮಾನತಿ­­ನಲ್ಲಿಟ್ಟಲ್ಲಿ ಅದು ಒಂದು ವರ್ಷ ಕಾಲ ಮುಂದುವರಿಯುತ್ತದೆ ಎಂದು ಅರ್ಜಿ­ದಾರ­­­ರಾದ ಆಮ್‌ ಆದ್ಮಿ ಪಕ್ಷ (ಎಎಪಿ)­ಕ್ಕೆ ಕೋರ್ಟ್‌ ತಿಳಿಸಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ­ಗೊ­ಳಿಸಿದ್ದನ್ನು ಪ್ರಶ್ನಿಸಿ ಎಎಪಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.