ADVERTISEMENT

ಮಹಾ ಕುಂಭಮೇಳ ಮುಕ್ತಾಯ: ಪ್ರಯಾಗರಾಜ್‌ನಲ್ಲಿ ಸ್ವಚ್ಛತಾ ಅಭಿಯಾನ ಆರಂಭ

ಪಿಟಿಐ
Published 28 ಫೆಬ್ರುವರಿ 2025, 14:21 IST
Last Updated 28 ಫೆಬ್ರುವರಿ 2025, 14:21 IST
<div class="paragraphs"><p>ಪ್ರಯಾಗರಾಜ್‌ನ ಸಂಗಮದಲ್ಲಿ&nbsp;ಶುಕ್ರವಾರ&nbsp;ವಿಶೇಷ ಸ್ವಚ್ಚತಾ ಅಭಿಯಾನದಲ್ಲಿ ನೈರ್ಮಲ್ಯ ಕಾರ್ಮಿಕರೊಬ್ಬರು ಕಸವನ್ನು ಸಂಗ್ರಹಿಸಿದರು</p></div>

ಪ್ರಯಾಗರಾಜ್‌ನ ಸಂಗಮದಲ್ಲಿ ಶುಕ್ರವಾರ ವಿಶೇಷ ಸ್ವಚ್ಚತಾ ಅಭಿಯಾನದಲ್ಲಿ ನೈರ್ಮಲ್ಯ ಕಾರ್ಮಿಕರೊಬ್ಬರು ಕಸವನ್ನು ಸಂಗ್ರಹಿಸಿದರು

   

–ಪಿಟಿಐ ಚಿತ್ರ

ಪ್ರಯಾಗರಾಜ್: ಮಹಾ ಕುಂಭಮೇಳ ಮುಕ್ತಾಯವಾಗಿದ್ದು, ಪ್ರಯಾಗರಾಜ್‌ನಲ್ಲಿ 15 ದಿನಗಳ ವಿಶೇಷ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ. 

ADVERTISEMENT

ಮೇಳದ ಬಳಿಕ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಹಾ ಕುಂಭಮೇಳದ ಸಮಯದಲ್ಲಿ ನೈರ್ಮಲ್ಯ ಕಾಪಾಡಿದ ಕಾರ್ಮಿಕರ ಸೇವೆಗಾಗಿ ಅವರನ್ನು ಸನ್ಮಾನಿಸಿ, ಕುಂಭಮೇಳದ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ವಚ್ಛತಾ ಅಭಿಯಾನದ ನೇತೃತ್ವವನ್ನು ವಿಶೇಷ ಅಧಿಕಾರಿ ಆಕಾಂಕ್ಷಾ ರಾಣಾ ಅವರು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.