ADVERTISEMENT

ಮಧ್ಯಪ್ರದೇಶ: ಇಬ್ಬರು ಸಚಿವರ ರಾಜೀನಾಮೆ

ಆರು ತಿಂಗಳಲ್ಲಿ ಶಾಸಕರಾಗಲು ಸಾಧ್ಯವಾಗದ ಹಿನ್ನೆಲೆ

ಪಿಟಿಐ
Published 21 ಅಕ್ಟೋಬರ್ 2020, 10:53 IST
Last Updated 21 ಅಕ್ಟೋಬರ್ 2020, 10:53 IST
ಗೋವಿಂದ್‌ ರಜಪೂತ್‌
ಗೋವಿಂದ್‌ ರಜಪೂತ್‌   

ಭೋಪಾಲ್‌: ಸಚಿವರಾಗಿ ಆರು ತಿಂಗಳಾದರೂ ವಿಧಾನಸಭೆಯ ಸದಸ್ಯರಾಗಲು ಸಾಧ್ಯವಾಗದ ಕಾರಣ ತುಳಸಿರಾಮ್‌ ಸಿಲಾವತ್‌ ಮತ್ತು ಗೋವಿಂದ್‌ ರಜಪೂತ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಇಬ್ಬರೂ ನ.3 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸದ್ಯ ಅವರಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಸಂವಿಧಾನದ ವಿಧಿ 164(4)ರ ಪ್ರಕಾರರಾಜ್ಯ ವಿಧಾನಸಭೆಯ ಸದಸ್ಯತ್ವವನ್ನು ಹೊಂದಿರದ ಸಚಿವರು ಅಧಿಕಾರ ಸ್ವೀಕರಿಸಿದ ಆರು ತಿಂಗಳಿನೊಳಗೆ ವಿಧಾನಸಭೆ ಸದಸ್ಯತ್ವವನ್ನು ಪಡೆಯದಿದ್ದಲ್ಲಿ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಇಲ್ಲ.

ADVERTISEMENT

ತುಳಸಿರಾಮ್‌ ಸಿಲಾವತ್‌ ಅವರು ಜಲಸಂಪನ್ಮೂಲ ಸಚಿವರಾಗಿ ಮತ್ತು ಗೋವಿಂದ್‌ ರಜಪೂತ್ ಅವರು ರಸ್ತೆಸಾರಿಗೆ ಸಚಿವರಾಗಿಏ.21 ರಂದು ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.