ADVERTISEMENT

ಎಎಪಿ–ಕಾಂಗ್ರೆಸ್‌ ಟ್ವೀಟ್‌ ವಾರ್‌: ಲೋಕಸಭಾ ಚುನಾವಣೆ ಮೈತ್ರಿಗೆ ಹಿನ್ನಡೆ

ಏಜೆನ್ಸೀಸ್
Published 27 ಡಿಸೆಂಬರ್ 2018, 5:24 IST
Last Updated 27 ಡಿಸೆಂಬರ್ 2018, 5:24 IST
ರಾಜ್ಯಸಭೆ ಸದಸ್ಯ ಎಂ.ಪಿ. ಸಂಜಯ್‌ ಸಿಂಗ್‌, ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕೇನ್‌
ರಾಜ್ಯಸಭೆ ಸದಸ್ಯ ಎಂ.ಪಿ. ಸಂಜಯ್‌ ಸಿಂಗ್‌, ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕೇನ್‌   

ನವದೆಹಲಿ:ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ನೀಡಲಾದ ‘ಭಾರತ ರತ್ನ’ವನ್ನು ಹಿಂದಕ್ಕೆ ಪಡೆಯುವಂತೆ ದೆಹಲಿ ಸರ್ಕಾರ ಅಂಗೀಕರಿಸಿದ ನಿರ್ಣಯ ಆಮ್‌ ಆದ್ಮಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೈತ್ರಿಗೆ ಹಿನ್ನಡೆಯಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕೇನ್‌ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ಮಾಕೇನ್‌ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ.ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖಂಡ ಅರವಿಂದ್‌ ಕೇಜ್ರಿವಾಲ್‌ ಅವರು2019ರಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಲುಮುಂದಾಗಿದ್ದರು.

ಮಾಕೇನ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಎಎಪಿ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಎಂ.ಪಿ. ಸಂಜಯ್‌ ಸಿಂಗ್‌, ದೆಹಲಿ ವಿಧಾನಸಭೆಯಲ್ಲಿ ಒಂದೇ ಒಂದು ಸ್ಥಾನಗೆಲ್ಲಲಾಗದ ಪಕ್ಷದ ನಾಯಕರು ಇನ್ನೂ ಸೊಕ್ಕಿನಿಂದಲೇ ಇದ್ದಾರೆ. ಒಂದು ವೇಳೆ ಪಾಠ ಕಲಿಯದಿದ್ದರೆಹಾಗೂ ಇದೇ ನಡೆಯನ್ನು ಮುಂದುವರಿಸಿದರೆ, ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಕಳೆದುಹೋಗಲಿದೆ ಎಂದು ಕುಟುಕಿದ್ದಾರೆ.

ADVERTISEMENT

1984ರ ಸಿಖ್‌ ಗಲಭೆಗೆ ಸಂಬಂಧಿಸಿದಂತೆ ಕೇಜ್ರಿವಾಲ್‌ ನೇತೃತ್ವದದೆಹಲಿ ಸರ್ಕಾರ ಡಿಸೆಂಬರ್‌ 21 ರಂದು ನಿರ್ಣಯ ಅಂಗೀಕರಿಸಿತ್ತು.ರಾಜೀವ್‌ ಗಾಂಧಿ ಅವರಿಗೆ ನೀಡಲಾಗಿರುವ ‘ಭಾರತ ರತ್ನ’ವನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಅದರ ಉದ್ದೇಶ.

ಈ ನಿರ್ಣಯದ ಬಳಿಕ ಉಭಯ ಪಕ್ಷಗಳ ನಾಯಕರು ಪರಸ್ಪರ ಮಾತಿನ ಚಾಟಿ ಬೀಸುತ್ತಿದ್ದಾರೆ. ಈ ವಿಚಾರವು ಎಎಪಿಯಲ್ಲಿಯೂ ಆಂತರಿಕ ಕಲಹ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.