ಹೈದರಾಬಾದ್:ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಖಾತೆಯನ್ನು ಲಾಕ್ ಮಾಡಿದ್ದ ಟ್ವಿಟರ್ ಕ್ರಮವನ್ನು ವಿರೋಧಿಸಿ ಆಂಧ್ರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.
‘ಟ್ವಿಟರ್ ಬರ್ಡ್’ ಫ್ರೈ ಮಾಡಿ ‘ಟ್ವಿಟರ್ ಇಂಡಿಯಾ’ ಪ್ರಧಾನ ಕಚೇರಿಗೆ ಕಳುಹಿಸಿಕೊಟ್ಟಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ. ಫ್ರೈ ಮಾಡುತ್ತಿರುವ ಮತ್ತು ಪಕ್ಷದ ನಾಯಕರ ಟ್ವೀಟ್ಗಳಿಗೆ ಪ್ರಚಾರ ನೀಡದ ಟ್ವಿಟರ್ ನಡೆಯನ್ನು ಖಂಡಿಸಿ ಘೋಷಣೆ ಕೂಗುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ನಾಯಕ ಜಿ.ವಿ.ಶ್ರೀರಾಜ್ ಎಂಬವರ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಮಾಜಿ ಸಂಸದ ಹರ್ಷ ಕುಮಾರ್ ಅವರ ಪುತ್ರ ಸಾಂಕೇತಿಕವಾಗಿ ‘ಟ್ವಿಟರ್ ಬರ್ಡ್’ ಫ್ರೈ ಮಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
‘ಟ್ವಿಟರ್ ಡಿಷ್ ಸಿದ್ಧವಾಗುತ್ತಿದೆ’ ಎಂಬುದು ಮತ್ತು ‘ಡೌನ್ ಡೌನ್ ಬಿಜೆಪಿ’ ಎಂಬ ಘೋಷಣೆಗಳನ್ನೂ ವಿಡಿಯೊದಲ್ಲಿ ಕಾಣಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.