ನವದೆಹಲಿ: ‘ಕಿರು ಉಪಗ್ರಹ ಉಡ್ಡಯನ ವಾಹನ’ವು (ಎಸ್ಎಸ್ಎಲ್ವಿ) ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿರುವುದರಿಂದ ಹಿನ್ನಡೆಯಾಗಿಲ್ಲ. ಶೀಘ್ರವೇ ಇನ್ನೊಂದು ಎಸ್ಎಸ್ಎಲ್ವಿ ನೌಕೆ ಉಡಾವಣೆಗೆ ಪ್ರಯತ್ನಿಸಲಾಗುವುದು ಎಂದು ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣ್ಕುಮಾರ್ ತಿಳಿಸಿದ್ದಾರೆ.
‘ಇಸ್ರೊದ ಹೊಸ ರಾಕೆಟ್ನ ಎಲ್ಲಾ ಮೂರು ಹಂತಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ’ ಎಂದೂ ಅವರು ವಿಫಲಗೊಂಡಿರುವ ಎಸ್ಎಸ್ಎಲ್ವಿ ಕುರಿತು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.