ಮುಂಬೈ: ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ ಮೇಕೆಯನ್ನು ರೈಲ್ವೆ ಇಲಾಖೆ ₹2,500ಗೆ ಹರಾಜು ಮಾಡಿದೆ.ಮಂಗಳವಾರ ಸಂಜೆ ಮಹಾರಾಷ್ಟ್ರದ ಮಸ್ಜೀದ್ ರೈಲ್ವೆ ನಿಲ್ದಾಣದಲ್ಲಿ ಮೇಕೆಯನ್ನು ರೈಲಿನಲ್ಲಿ ಕರೆತಂದ ವ್ಯಕ್ತಿ ಟಿಕೆಟ್ ಕಲೆಕ್ಟರ್ಬರುತ್ತಿದ್ದಂತೆ ಮೇಕೆಯನ್ನು ಬಿಟ್ಟು ಪರಾರಿಯಾಗಿದ್ದ.ಹಾಗಾಗಿ ಅನಾಥವಾದ ಮೇಕೆಯನ್ನು ಹರಾಜು ಮಾಡಲು ರೈಲ್ವೆ ಇಲಾಖೆ ತೀರ್ಮಾನಿಸಿತ್ತು.
ಗುರುವಾರ ಸಂಜೆ ಮೇಕೆಯನ್ನು ಹರಾಜು ಮಾಡಿದ್ದು ರೈಲ್ವೆಯಲ್ಲಿ ಕೆಲಸ ಕೂಲಿಮಾಡುತ್ತಿರುವ ಅಬ್ದುಲ್ ರೆಹಮಾನ್ ಎಂಬವರು ₹2,500ನೀಡಿ ಖರೀದಿಸಿದ್ದಾರೆ.ಬಸಂತಿ ಎಂಬ ಹೆಸರಿಟ್ಟಿರುವ ಈ ಮೇಕೆಯನ್ನು ರೆಹಮಾನ್ ಅವರು ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಊರಿಗೆ ಆಗಸ್ಟ್ 16ರಂದು ಕರೆದೊಯ್ಯಲಿದ್ದಾರೆ.
ನನಗೆ ಬಸಂತಿಯನ್ನು ನೋಡಿದ ಕೂಡಲೇ ಇಷ್ಟವಾಯಿತು.ಆಕೆ ಮುಗ್ದೆ ಮತ್ತು ಶಾಂತ ಸ್ವಭಾವದವಳು. ಆಕೆಯನ್ನು ಕಸಾಯಿಖಾನೆಗೆ ಕೊಡಲಾರೆ. ಬಸಂತಿಯನ್ನು ಖರೀದಿಸಲು ನಾನು ನನ್ನ ಉಳಿತಾಯದ ಎಲ್ಲ ಹಣ ಖರ್ಚು ಮಾಡಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ರೆಹಮಾನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.