ADVERTISEMENT

ವಿಮಾನದ ಸಮಸ್ಯೆಯಿಂದ ಭಾರತದಲ್ಲೇ ಉಳಿದಿದ್ದ ಪ್ರಧಾನಿ ಜಸ್ಟಿನ್‌ ಕೆನಡಾಕ್ಕೆ ವಾಪಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2023, 10:06 IST
Last Updated 12 ಸೆಪ್ಟೆಂಬರ್ 2023, 10:06 IST
<div class="paragraphs"><p>ಜಸ್ಟಿನ್‌ ಟ್ರೂಡೊ</p></div>

ಜಸ್ಟಿನ್‌ ಟ್ರೂಡೊ

   

ನವದೆಹಲಿ: ಜಿ20 ಶೃಂಗಸಭೆಗೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಇಂದು ದೇಶಕ್ಕೆ ವಾಪಸ್‌ ತೆರಳಿದ್ದಾರೆ.

ಕಳೆದ ಶುಕ್ರವಾರ (ಸೆ.8) ಟ್ರುಡೋ ಭಾರತಕ್ಕೆ ಬಂದಿದ್ದರು. ಶೃಂಗಸಭೆ ಮುಗಿಸಿ ಭಾನುವಾರ (ಸೆ.10)ಕೆನಡಾಕ್ಕೆ ತೆರಳಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಉಳಿದುಕೊಂಡಿದ್ದರು. 

ADVERTISEMENT

36 ಗಂಟೆಗಳ ಬಳಿಕ ಇಂದು ಮಧ್ಯಾಹ್ನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದೆ, ವಿಮಾನ ಹಾರಾಟಕ್ಕೆ ಆಕಾಶವೂ ಸಂಚಾರಮುಕ್ತವಾಗಿದೆ. ಇಂದು ಮಧ್ಯಾಹ್ನ ಕೆನಡಾ ನಿಯೋಗ ದೆಹಲಿಯಿಂದ ಹೊರಟಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.