ನವದೆಹಲಿ: ‘ಮುಂದಿನ ಎರಡು ದಿನಗಳ ಕಾಲ ವಾಯವ್ಯ ಭಾರತದಲ್ಲಿ ತೀವ್ರ ಶೀತಗಾಳಿಯ ವಾತಾವರಣವು ಮುಂದುವರಿಯಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ಸೋಮವಾರ ತಿಳಿಸಿದೆ.
‘ಮುಂದಿನ ಮೂರು ದಿನಗಳ ಕಾಲ ಮಧ್ಯ, ಪೂರ್ವ ಭಾರತದಲ್ಲಿ ಶೀತಗಾಳಿಯ ಪರಿಸ್ಥಿತಿಯು ಇರಲಿದ್ದು, ನಂತರ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಇಲಾಖೆಯು ಮಾಹಿತಿ ನೀಡಿದೆ.
‘ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಶೀತಗಾಳಿಯು ತೀವ್ರ ಶೀತಗಾಳಿಯಾಗಿ ಬದಲಾಗಲಿದೆ. ಉತ್ತರಾಖಂಡ, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್ನಲ್ಲಿ ಬುಧವಾರ ಮಧ್ಯಾಹ್ನದವರೆಗೆ ಶೀತಗಾಳಿ ಮುಂದುವರಿಯಲಿದೆ. ಜಮ್ಮು–ಕಾಶ್ಮೀರ, ಲಡಾಖ್,ಬಲಿಸ್ಥಾನ್, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ಮಧ್ಯಾಹ್ನದವರೆಗೆ ಶೀತಗಾಳಿಯ ಪ್ರಭಾವ ಇರಲಿದ್ದು, ನಂತರ ಕಡಿಮೆಯಾಗಲಿದೆ’ಎಂದು ಐಎಂಡಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.