ADVERTISEMENT

ಭಾರತದ ಬಾಹ್ಯಾಕಾಶ ಯಾನವನ್ನು ತಡೆದ ಕಾಂಗ್ರೆಸ್ : ಸಂಸದ ನಿಶಿಕಾಂತ್ ದುಬೆ ಆರೋಪ

ಪಿಟಿಐ
Published 19 ಆಗಸ್ಟ್ 2025, 10:27 IST
Last Updated 19 ಆಗಸ್ಟ್ 2025, 10:27 IST
   

ನವದೆಹಲಿ: ವಿಂಗ್ ಕಮಾಂಡರ್ ಶುಭಂಶು ಶುಕ್ಲಾ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಕೆರಳದಲ್ಲಿ ಇಸ್ರೋದ ವಿಜ್ಞಾನಿ ನಂಬಿ ನಾರಾಯಣನ್ ಇದ್ದರು. 1994ರಲ್ಲಿ ಕಾಂಗ್ರೆಸ್ ಸರ್ಕಾರ ಸಿಬಿಐ ಮೂಲಕ ಅವರನ್ನು ಬಂಧಿಸಿತು. ಇದು ಭಾರತದಲ್ಲಿ ಬಾಹ್ಯಾಕಾಶ ಕಾರ್ಯದ ಉನ್ನತಿಗೆ ತಡೆ ಆಗುವಂತೆ ಮಾಡಿತು ಎಂದು ದುಬೆ ಆರೋಪಿಸಿದರು.

ಕಾಂಗ್ರೆಸ್ ಪಕ್ಷ ತನ್ನ ಆಡಳಿತಾವಧಿಯಲ್ಲಿ ಅಮೆರಿಕ, ಚೀನಾ ಮತ್ತು ಪಾಕಿಸ್ತಾನ ಜೊತೆ ತೊಡಗಿಸಿಕೊಂಡು, ಭಾರತದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕಡಿವಾಣ ಹಾಕಿತು ಎಂದು ಆರೋಪಿಸಿದ್ದಾರೆ.

ADVERTISEMENT

ಇಂತಹ ಮಹತ್ವದ ವಿಷಯವಾದ ಬಾಹ್ಯಾಕಾಶ ಮಿಷನ್ ಕುರಿತು ಕಾಂಗ್ರೆಸ್ ಏಕೆ ಚರ್ಚೆ ಮಾಡುತ್ತಿಲ್ಲ ಎಂಬುವುದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.