ADVERTISEMENT

‘ಬಿಜೆಪಿ ಗದ್ದೀ ಛೋಡೋ’ ಎಂಬ ಅಭಿಯಾನ ನಡೆಸಲು ಸಿದ್ದವಾದ ಕಾಂಗ್ರೆಸ್

ಪಿಟಿಐ
Published 5 ಆಗಸ್ಟ್ 2021, 7:46 IST
Last Updated 5 ಆಗಸ್ಟ್ 2021, 7:46 IST
ಪ್ರಿಯಾಂಕಾ ಗಾಂಧಿ ಹಾಗೂ ಯೋಗಿ ಆದಿತ್ಯನಾಥ
ಪ್ರಿಯಾಂಕಾ ಗಾಂಧಿ ಹಾಗೂ ಯೋಗಿ ಆದಿತ್ಯನಾಥ   

ಲಕ್ನೋ; ಉತ್ತರ ಪ್ರದೇಶ ಸರ್ಕಾರದ ವಿರುದ್ಧ 'ಬಿಜೆಪಿ ಗದ್ದೀ ಛೋಡೋ' (ಅಧಿಕಾರ ಬಿಡಿ) ಎಂಬ ಅಭಿಯಾನವನ್ನು ಆಗಸ್ಟ್ 9 ಮತ್ತು 10 ರಂದು ರಾಜ್ಯಾದ್ಯಂತ ಕಾಂಗ್ರೆಸ್ ಹಮ್ಮಿಕೊಂಡಿದೆ.

‘ಬಿಜೆಪಿ ಗದ್ದೀ ಛೋಡೋಅಭಿಯಾನದ ಪ್ರಯುಕ್ತ ಉತ್ತರ ಪ್ರದೇಶ ಬಿಜೆಪಿ ಸರ್ಕಾರದದುರಾಡಳಿತ ಖಂಡಿಸಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ, ಮೆರವಣಿಗೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರ‌ ನೇತೃತ್ವವನ್ನು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ವಹಿಸಿಕೊಳ್ಳಲಿದ್ದಾರೆ’ಎಂದು ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ತಿಳಿಸಿದ್ದಾರೆ.

‘ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದ ಎಲ್ಲ ಸಮುದಾಯಗಳು ಬಿಜೆಪಿ ಸರ್ಕಾರದ ಆಡಳಿತ ಕಂಡು ತೀವ್ರ ನಿರಾಸೆಯಾಗಿವೆ. ಎಲ್ಲೆಡೆಯೂ ಜಂಗಲ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ’ಎಂದು ಲಲ್ಲು ಹೇಳಿದರು.

ADVERTISEMENT

ಮುಂದಿನ ವರ್ಷ ಪೆಬ್ರವರಿ ಅಥವಾ ಮಾರ್ಚ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.