ADVERTISEMENT

ಗೋ ಮೂತ್ರ ಅರ್ಕ ಸೇವನೆಯಿಂದ ಕೊರೊನಾದಿಂದ ರಕ್ಷಣೆ: ಪ್ರಜ್ಞಾ

ಪಿಟಿಐ
Published 17 ಮೇ 2021, 14:08 IST
Last Updated 17 ಮೇ 2021, 14:08 IST
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್   

ಭೋಪಾಲ: ಗೋ ಮೂತ್ರ ಅರ್ಕವು ಕೊರೊನಾ ವೈರಸ್ ಮತ್ತು ಶ್ವಾಸಕೋಶದ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ದೇಶಿಹಸುವಿನ ಗೋಮೂತ್ರ ಅರ್ಕವು ನಮ್ಮ ಶ್ವಾಸಕೋಶದಿಂದ ಸೋಂಕನ್ನು ನಿವಾರಿಸುತ್ತದೆ. ನಾನು ತುಂಬಾ ಆರೋಗ್ಯ ಸಮಸ್ಯೆಯಲ್ಲಿದ್ದೇನೆ. ಆದರೆ ಪ್ರತಿದಿನ ಗೋಮೂತ್ರ ಅರ್ಕ ಸೇವಿಸುತ್ತೇನೆ. ಇದರಿಂದಾಗಿ ಕೊರೊನಾವೈರಸ್‌ಗಾಗಿ ಬೇರೆ ಔಷಧಿ ತೆಗೆದುಕೊಳ್ಳಬೇಕಾಗಿಲ್ಲ. ನನಗೆ ಇದುವರೆಗೆ ಕೊರೊನಾವೈರಸ್ ಸೋಂಕು ತಗುಲಿಲ್ಲ ಎಂದು ಪ್ರಜ್ಞಾ ತಿಳಿಸಿದ್ದಾರೆ.

ಗೋ ಮೂತ್ರವು ಜೀವ ಉಳಿಸುವ ಔಷಧಿ. ಗೋಮೂತ್ರ ಔಷಧಿಯನ್ನು ಬಳಸುತ್ತಿರುವುದರಿಂದ ದೇವರು ನನ್ನನ್ನು ರಕ್ಷಿಸುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಭೋಪಾಲದಲ್ಲಿ ಆಮ್ಲಜನಕ ಸಾಂದ್ರಕ ವಿತರಿಸುವ ಕಾರ್ಯಕ್ರಮವೊಂದರಲ್ಲಿ ಪ್ರಜ್ಞಾ ಹೇಳಿದ್ದಾರೆ.

ಏತನ್ಮಧ್ಯೆ ಗೋಮೂತ್ರ ಕುಡಿಯುವವರಿಗೆ ಸಗಣಿ ಲೇಪಿಸಿಕೊಳ್ಳುವವರಿಗೆ ವೈದ್ಯರು ಎಚ್ಚರಿಕೆ ನೀಡಿರುವುದು ಇಲ್ಲಿ ಗಮನಾರ್ಹವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.