ADVERTISEMENT

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ: ಕ್ರಿಕೆಟಿಗ ಎಂ.ಎಸ್ ಧೋನಿಗೆ ಆಹ್ವಾನ

ಪಿಟಿಐ
Published 16 ಜನವರಿ 2024, 3:03 IST
Last Updated 16 ಜನವರಿ 2024, 3:03 IST
<div class="paragraphs"><p>ಎಂ.ಎಸ್ ಧೋನಿಗೆ ಆಹ್ವಾನ</p></div>

ಎಂ.ಎಸ್ ಧೋನಿಗೆ ಆಹ್ವಾನ

   

– ಎಕ್ಸ್‌ ಚಿತ್ರ

ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ, ಆರ್ಚರಿ ಪಟು ದೀಪಿಕಾ ಕುಮಾರಿ ಹಾಗೂ ಜನಪದ ಗಾಯಕ ಮುಕುಂದ್‌ ನಾಯಕ ಸೇರಿ ಜಾರ್ಖಂಡ್‌ನ 16 ಮಂದಿಗೆ, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ADVERTISEMENT

ಆರ್‌ಎಸ್‌ಎಸ್‌ನ ಹಿರಿಯ ನಾಯಕ ಧನಂಜಯ್‌ ಸಿಂಗ್‌, ರಾಂಚಿಯಲ್ಲಿರುವ ಧೋನಿ ಮನೆಗೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ಕರ್ಮವೀರ ಸಿಂಗ್‌ ಈ ವೇಳೆ ಇದ್ದರು.

‘ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಪರವಾಗಿ ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾವು ಧೋನಿಯವರಿಗೆ ಆಹ್ವಾನ ಪತ್ರಿಕೆ ನೀಡಿದ್ದೇವೆ’ ಎಂದು ಧನಂಜಯ್ ಸಿಂಗ್‌ ಹೇಳಿದರು.

ಆಹ್ವಾನ ಪತ್ರಿಕೆ ಲಭಿಸಿದ್ದಕ್ಕೆ ಧೋನಿ ಹಾಗೂ ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.