ADVERTISEMENT

ಬದುಕಲು ದೆಹಲಿ ಯೋಗ್ಯವಲ್ಲ: ಸುಪ್ರೀಂ ಕೋರ್ಟ್‌ ಕಳವಳ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:01 IST
Last Updated 18 ಜನವರಿ 2019, 19:01 IST

ನವದೆಹಲಿ: ವಾಹನಗಳ ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ದೆಹಲಿ ಈಗ ‘ಗ್ಯಾಸ್‌ ಚೇಂಬರ್‌’ ಆಗುತ್ತಿದ್ದು, ಬದುಕಲು ಉತ್ತಮ ನಗರವಾಗಿ ಉಳಿದಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

‘ಬೆಳಿಗ್ಗೆ ಮತ್ತು ಸಂಜೆ ಅಪಾರ ಮಾಲಿನ್ಯ ಮತ್ತು ಸಂಚಾರದ ದಟ್ಟಣೆ ಇರುತ್ತದೆ. ದೆಹಲಿಯಲ್ಲಿ ವಾಸಿಸದಿರುವುದೇ ಉತ್ತಮ. ನಾನು ದೆಹಲಿಯಲ್ಲೇ ನೆಲೆಯೂರಲು ಇಚ್ಛಿಸಿಲ್ಲ. ದೆಹಲಿಯಲ್ಲಿ ವಾಸಿಸುವುದು ಸಹ ಕಷ್ಟಕರ’ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT