ADVERTISEMENT

ದೆಹಲಿ: ಮನೆ ಬಾಗಿಲಿಗೆ ಪಡಿತರ ಆಹಾರ ವಿತರಣೆ

ಪಿಟಿಐ
Published 21 ಜುಲೈ 2020, 9:21 IST
Last Updated 21 ಜುಲೈ 2020, 9:21 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ:ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರಆಹಾರ ವಿತರಣಾ (ಡೆಲಿವರಿ) ಯೋಜನೆಗೆದೆಹಲಿ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ.

ಈ ಯೋಜನೆಗೆ‘ಮುಖ್ಯಮಂತ್ರಿ ಘರ್‌ ಘರ್‌ ರೇಷನ್ ರೇಷನ್‌ ಯೋಜನಾ’ ಎಂದು ಹೆಸರಿಡಲಾಗಿದ್ದು, ಇದೊಂದು ಕ್ರಾಂತಿಕಾರಿ ನಡೆ ಎಂದು‍ದೆಹಲಿ ಮುಖ್ಯಮಂತ್ರಿ ಅರವಿಂದ‌ ಕೇಜ್ರಿವಾಲ್‌ ಅವರು ಹೇಳಿದರು.

ದೆಹಲಿ ಸಂಪುಟದ ಸಭೆಯಲ್ಲಿ ಯೋಜನೆಗೆ ಅಂಗೀಕಾರ ದೊರೆತಿದೆ. ಟೆಂಡರ್‌ ಮತ್ತಿತರ ಪ್ರಕ್ರಿಯೆಗಳ ನಂತರ 6–7 ತಿಂಗಳಲ್ಲಿ ಯೋಜನೆ ಜಾರಿಗೆ ಬರುವ ನಿರೀಕ್ಷೆಯಿದೆ.

ADVERTISEMENT

ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಯೋಜನೆಯು 6–7 ತಿಂಗಳೊಳಗೆ ಜಾರಿಗೆ ಬರಲಿದೆ.‘ಮುಖ್ಯಮಂತ್ರಿ ಘರ್‌ ಘರ್‌ ರೇಷನ್ ರೇಷನ್‌ ಯೋಜನೆಯಡಿ ಗೋಧಿ, ಹಿಟ್ಟು, ಅಕ್ಕಿ, ಸಕ್ಕರೆಯನ್ನು ಶುಚಿಯಾಗಿ ಪ್ಯಾಕ್‌ ಮಾಡಿ ಜನರ ಮನೆ ಬಾಗಿಲಿಗೆ ವಿತರಣೆ ಮಾಡಲಾಗುವುದು. ಪಡಿತರ ಅಂಗಡಿಯಿಂದಲೂ ಅವರು ನೇರವಾಗಿ ರೇಷನ್‌ ಅನ್ನು ಪಡೆಯಬಹುದು. ಇದು ಫಲಾನುಭವಿಗಳ ಆಯ್ಕೆಗೆ ಬಿಟ್ಟದ್ದು’ ಎಂದರು.

ಈ ಯೋಜನೆಯೊಂದಿಗೆ ‘ಒಂದು ದೇಶ ಒಂದು ಪಡಿತರ’ ಯೋಜನೆಯೂ ಕೂಡ ಅನುಷ್ಠಾನಕ್ಕೆ ಬರಲಿದೆ ಎಂದು ಕೇಜ್ರಿವಾಲ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.