ADVERTISEMENT

12 ದಿನಗಳ ಮುಷ್ಕರ ಅಂತ್ಯಗೊಳಿಸಿದ ದೆಹಲಿ ವಕೀಲರು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 14:27 IST
Last Updated 15 ನವೆಂಬರ್ 2019, 14:27 IST
ದೆಹಲಿ ವಕೀಲರು
ದೆಹಲಿ ವಕೀಲರು   

ನವದೆಹಲಿ: ನವೆಂಬರ್ 2ರಂದು ತೀಸ್ ಹಜಾರಿ ನ್ಯಾಯಾಲಯದ ಆವರಣದವ್ವಿ ಪೊಲೀಸ್ ಮತ್ತು ವಕೀಲರ ನಡುವೆ ನಡೆದ ಸಂಘರ್ಷ ಖಂಡಿಸಿ ಮುಷ್ಕರ ಹೂಡಿದ್ದ ದೆಹಲಿ ಜಿಲ್ಲಾ ನ್ಯಾಯಾಲಯದ ವಕೀಲರು ಮುಷ್ಕರ ಅಂತ್ಯಗೊಳಿಸಿದ್ದಾರೆ.

12 ದಿನಗಳಿಂದ ಮುಷ್ಕರ ನಿರತರಾಗಿರುವ ವಕೀಲರು ಶನಿವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ದೆಹಲಿಯ ಜಿಲ್ಲಾ ನ್ಯಾಯಾಲಯಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಧೀರ್ ಸಿಂಗ್ ಕಸಾನ ಹೇಳಿದ್ದಾರೆ.

ನಾವು ಹೈಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಶನಿವಾರದಿಂದ ಕೆಲಸ ಮುಂದುವರಿಯಲಿದೆ. ಸಹಕರಿಸಿದ್ದರಕ್ಕಾಗಿ ಎಲ್ಲ ಸದಸ್ಯರಿಗೂ ಧನ್ಯವಾದಗಳು. ವಕೀಲರ ರಕ್ಷಣಾ ಕಾಯ್ದೆಗಿರುವ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಸಾನಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.