ADVERTISEMENT

Delhi Red Fort Blast: ಸಹ ಸಂಚುಕೋರ ಬಿಲಾಲ್‌ 10 ದಿನ ಎನ್‌ಐಎ ಕಸ್ಟಡಿಗೆ

ಪಿಟಿಐ
Published 18 ನವೆಂಬರ್ 2025, 9:33 IST
Last Updated 18 ನವೆಂಬರ್ 2025, 9:33 IST
<div class="paragraphs"><p>ದೆಹಲಿ ಸ್ಫೋಟ: ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿ</p></div>

ದೆಹಲಿ ಸ್ಫೋಟ: ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿ

   

(ಪಿಟಿಐ ಚಿತ್ರ)

ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದಲ್ಲಿ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿನನ್ನು 10 ದಿನ ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ) ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜೈಸಿರ್‌ ಬಿಲಾಲ್‌ ವಾನಿ ಎಂಬವನನ್ನು ಸೋಮವಾರ ಎನ್‌ಐಎ ಶ್ರೀನಗರದಲ್ಲಿ ಬಂಧಿಸಿತ್ತು.

ಜೈಸಿರ್‌ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಕಾಜಿಗುಂಡ ನಿವಾಸಿಯಾಗಿದ್ದು, ಭಯೋತ್ಪಾದಕ ದಾಳಿ ನಡೆಸಲು ತಾಂತ್ರಿಕ ನೆರವು ನೀಡಿದ ಆರೋಪ ಈತನ ಮೇಲಿದೆ ಎಂದು ಎನ್‌ಐಎ ತಿಳಿಸಿದೆ.

ಪಟಿಯಾಲ ಹೌಸ್ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಯಿತು.

ಸೋಮವಾರದಂದು ಪ್ರಮುಖ ಸಂಚುಕೋರು ಅಮೀರ್‌ ರಷೀದ್‌ ಅಲಿನನ್ನು 10 ದಿನ ಎನ್‌ಐಎ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿತ್ತು.

ನವೆಂಬರ್ 10ರಂದು ಕೆಂಪು ಕೋಟೆಯ ಸಮೀಪ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 15 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಕಾರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ವೈದ್ಯ ಉಮರ್ ನಬಿ ಚಲಾಯಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆದರೆ ಸ್ಫೋಟಗೊಂಡ ಹ್ಯುಂಡೈ ಐ20 ಕಾರು ಅಮೀರ್‌ ಹೆಸರಿನಲ್ಲಿ ನೋಂದಣಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.