ADVERTISEMENT

ವಾಮಾಚಾರದ ಶಂಕೆ: ಬುಡಕಟ್ಟು ಸಮುದಾಯದ ವೃದ್ಧೆ ಕೊಲೆ

ಪಿಟಿಐ
Published 17 ಜುಲೈ 2022, 15:04 IST
Last Updated 17 ಜುಲೈ 2022, 15:04 IST
   

ಬಾರಿಪಾದ: ವಾಮಾಚಾರ ನಡೆಸುತ್ತಿರುವ ಶಂಕೆ ಮೇಲೆ ವ್ಯಕ್ತಿಯೊಬ್ಬರು ಒಡಿಶಾದ ಬುಡಕಟ್ಟು ಸಮುದಾಯಕ್ಕೆ ಸೇರಿದ ವೃದ್ಧೆಯೊಬ್ಬರನ್ನು ಕೊಲೆ ಮಾಡಿದ್ದಾರೆ.

ಮೃತರನ್ನು ಗಂಗಿ ಜಮುದಾ (70) ಎಂದು ಗುರುತಿಸಲಾಗಿದೆ. ಇವರು ಒಡಿಶಾದ ಮಯೂರ್‌ ಭಂಜ್‌ ಜಿಲ್ಲೆಯ ಬಾದಾಮ್‌ತೊಲಿಯಾ ಗ್ರಾಮದವರು.

‘ಇದೇ ಗ್ರಾಮದ ಮದನ್‌ ಪಿಂಗುವಾ (60) ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಜಮ್ದಾ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ತಮ್ಮ ಕುಟುಂಬದವರನ್ನು ಗುರಿಯಾಗಿಟ್ಟುಕೊಂಡು ವಾಮಾಚಾರ ನಡೆಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಆರೋಪಿಯು ಶನಿವಾರ ರಾತ್ರಿ ಜಮುದಾ ಅವರನ್ನುಲಾಠಿಯಿಂದ ಥಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಮದನ್‌ ಜೊತೆ ಕಮಲಾಕಾಂತ್‌ ದಾಸ್‌ ಎಂಬಾತನನ್ನೂ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.