ಡೆಹ್ರಾಡೂನ್: ಅಲೋಪಥಿ ವೈದ್ಯಕೀಯ ಪದ್ಧತಿ ಮತ್ತು ಅಲೋಪತಿ ವೈದ್ಯರಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಮಾತುಗಳನ್ನಾಡಿದ್ದ ಬಾಬಾ ರಾಮ್ದೇವ್ ಅವರನ್ನು ಬಂಧಿಸುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಗಳು ಕೇಳಿಬರುತ್ತಿವೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಾಬಾ ರಾಮ್ದೇವ್, ‘ಅವರಪ್ಪನಿಂದಲೂ ನನ್ನ ಬಂಧಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ಕೇವಲ ಶಬ್ದ ಮಾಡುತ್ತಿರುವ ಅವರು, ಕೊಲೆಗಡುಕ ರಾಮ್ದೇವ್, ಮಹಾ ಕೊಲೆಗಡುಕ ರಾಮ್ದೇವ್, ರಾಮ್ದೇವ್ನನ್ನು ಬಂಧಿಸಿ ಎಂದೆಲ್ಲ ಟ್ರೆಂಡ್ಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ರಾಮ್ದೇವ್ ಅವರ ಈ ಪ್ರತಿಕ್ರಿಯೆ ಇರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಆಗಿದೆ.
ಅಲೋಪಥಿ ಮತ್ತು ಅಲೋಪಥಿ ವೈದ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ರಾಮ್ದೇವ್ ಅವರು, ಈ ಬಗ್ಗೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿರುವುದು ಇತ್ತೀಚಿನ ವಿಡಿಯೊವೊಂದರಿಂದ ಗೊತ್ತಾಗುತ್ತದೆ ಎಂದು ಡೆಹ್ರಾಡೂನ್ ವೈದ್ಯರೊಬ್ಬರು ಹೇಳಿದ್ದಾರೆ.
‘ರಾಮದೇವ್ ಅವರ ಹೇಳಿಕೆಯು ದುರಹಂಕಾರದಿಂದ ಕೂಡಿದೆ. ಅವರು ತಾನು ಕಾನೂನಿಗಿಂತ ಮೇಲಿದ್ದೇನೆ ಎಂಬಂತೆ ವರ್ತಿಸುತ್ತಿದ್ದಾರೆ’ ಎಂದು ಆ ವೈದ್ಯರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.