ADVERTISEMENT

ಗುಜರಾತ್‌ ಕರಾವಳಿ ತಲುಪಿದ ತೌತೆ ಚಂಡಮಾರುತ

ಏಜೆನ್ಸೀಸ್
Published 17 ಮೇ 2021, 16:29 IST
Last Updated 17 ಮೇ 2021, 16:29 IST
ಗುಜರಾತ್‌ ಕರಾವಳಿಯಲ್ಲಿ ಎನ್‌ಡಿಆರ್‌ಎಫ್‌ ತಂಡ
ಗುಜರಾತ್‌ ಕರಾವಳಿಯಲ್ಲಿ ಎನ್‌ಡಿಆರ್‌ಎಫ್‌ ತಂಡ   

ಗಾಂಧಿನಗರ: ತೀವ್ರಗೊಂಡಿರುವ 'ತೌತೆ' ಚಂಡಮಾರುತವು ಸೋಮವಾರ ರಾತ್ರಿ ಗುಜರಾತ್‌ ಕರಾವಳಿಯನ್ನು ಪ್ರವೇಶಿಸಿದೆ. ಮಳೆ, ಗಾಳಿಯ ಅಬ್ಬರವು ಮುಂದಿನ ಎರಡು ಗಂಟೆಗಳು ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಗಾಂಧಿನಗರದಲ್ಲಿರುವ ನಿಯಂತ್ರಣ ಕೇಂದ್ರದಲ್ಲಿ ತೌತೆ ಚಂಡಮಾರುತದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ.

ಭಾರತೀಯ ಸೇನೆಯ 180 ತಂಡಗಳು ಹಾಗೂ ಒಂಬತ್ತು ಎಂಜಿನಿಯರ್‌ ಕಾರ್ಯಪಡೆಗಳು ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿವೆ. ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರೊಂದಿಗೆ ವಲಯದ ಮುಖ್ಯಕಚೇರಿ, ವಲಯದ ಕಮಾಂಡರ್‌ಗಳು ಸಂಪರ್ಕದಲ್ಲಿದ್ದಾರೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ ಕನಿಷ್ಠ 1.50 ಲಕ್ಷ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ.

ಗುಜರಾತ್‌ನಲ್ಲಿ 1998ರಲ್ಲಿ ಅಬ್ಬರಿಸಿದ್ದ ಭಾರೀ ಚಂಡಮಾರುತದಲ್ಲಿ ಸುಮಾರು 4,000 ಜನರು ಸಾವಿಗೀಡಾಗಿದ್ದರು ಹಾಗೂ ನೂರಾರು ಕೋಟಿ ಮೌಲ್ಯದ ಆಸ್ತಿ–ಪಾಸ್ತಿಗೆ ಹಾನಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.