ADVERTISEMENT

ಹರಿಯಾಣ: ಬಿಜೆಪಿ ಮುಖಂಡರ ಕಾರ್ಯಕ್ರಮ ಗುರಿಯಾಗಿಸಿ ರೈತರ ಪ್ರತಿಭಟನೆ

ಪಿಟಿಐ
Published 11 ಜುಲೈ 2021, 14:35 IST
Last Updated 11 ಜುಲೈ 2021, 14:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಹರಿಯಾಣದಲ್ಲಿ ಬಿಜೆಪಿ ಮುಖಂಡರ ಕಾರ್ಯಕ್ರಮಗಳನ್ನು ಗುರಿಯಾಗಿಸಿ ಭಾನುವಾರದಂದು ರೈತರು ಪ್ರತಿಭಟನೆ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ಫತೇಹಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹರಿಯಾಣದ ಸಚಿವ ಭನ್ವಾರಿ ಲಾಲ್ ಹಾಗೂ ಸಂಸದೆ ಸುನಿತಾ ದುಗ್ಗಲ್ ಭಾಗವಹಿಸಿದ ಕಾರ್ಯಕ್ರಮದ ಭದ್ರತೆ ಸಲುವಾಗಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ರೈತರು ತೆರವುಗೊಳಿಸಲು ಮುಂದಾದರು.

ADVERTISEMENT

ಈ ಸಂದರ್ಭದಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ನುಗ್ಗದಂತೆ ಪೊಲೀಸರು ತಡೆಯೊಡ್ಡಿದರು. ಈ ವೇಳೆ ಕಪ್ಪು ಬಾವುಟವನ್ನು ತೋರಿಸುವ ಮೂಲಕ ಸರ್ಕಾರದ ವಿರುದ್ಧ ರೈತರು ಘೋಷಣೆಗಳನ್ನು ಕೂಗಿದರು.

ಜಾಜ್ಜರ್‌ನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಓಂ ಪ್ರಕಾಶ್ ಧನಕರ್ ಭಾಗವಹಿಸುವ ಕುರಿತು ಮಾಹಿತಿ ಪಡೆದ ರೈತರು ಒಗ್ಗೂಡಿದರು. ಅಲ್ಲದೆ ವಿವಾದಿತ ಕಾಯ್ದೆ ರದ್ದುಗೊಳಿಸದೇ ಬಿಜೆಪಿ ಅಥವಾ ಮಿತ್ರ ಪಕ್ಷ ಕಾರ್ಯಕ್ರಮ ಆಯೋಜಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸಿರ್ಸಾ, ಅಂಬಾಲಾದಲ್ಲೂ ಇದಕ್ಕೂ ಸಮಾನವಾದ ಪ್ರತಿಭಟನೆಯು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.