ADVERTISEMENT

ದೆಹಲಿ ಜನತೆಯ ಸೇವೆಗಾಗಿ 'ರಾಮರಾಜ್ಯ’ದ 10 ತತ್ವಗಳ ಪಾಲನೆ: ಅರವಿಂದ ಕೇಜ್ರಿವಾಲ್

ಪಿಟಿಐ
Published 10 ಮಾರ್ಚ್ 2021, 10:04 IST
Last Updated 10 ಮಾರ್ಚ್ 2021, 10:04 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ದೆಹಲಿ ಜನತೆಯ ಸೇವೆಗಾಗಿ ತಮ್ಮ ಸರ್ಕಾರ ರಾಮರಾಜ್ಯ ಪರಿಕಲ್ಪನೆಯಿಂದ ಪ್ರಭಾವಿತವಾದ 10 ತತ್ವಗಳನ್ನು ಅನುಸರಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ದೆಹಲಿಯ ಹಿರಿಯ ನಾಗರಿಕರನ್ನು ಅಲ್ಲಿಗೆ ದರ್ಶನಕ್ಕಾಗಿ ಕಳುಹಿಸುವುದಾಗಿಯೂ ಅವರು ತಿಳಿಸಿದರು.

ಲೆಫ್ಟಿನೆಂಟ್‌ ಗವರ್ನರ್‌ ಅವರ ಬಜೆಟ್‌ ಭಾಷಣಕ್ಕೆ ವಂದನೆ ಸೂಚಿಸು ಗೊತ್ತುವಳಿಯ ಮೇಲೆ ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ನಾನು ಶ್ರೀರಾಮ ಮತ್ತು ಹನಮಾನ್‌ ಭಕ್ತ. ರಾಮರಾಜ್ಯದಿಂದ ಪ್ರಭಾವಿತವಾದ 10 ತತ್ವಗಳನ್ನು ನಾವು ಅನುಸರಿಸುತ್ತಿದ್ದೇವೆ. ಆಹಾರ, ಶಿಕ್ಷಣ, ವೈದ್ಯಕೀಯ ಕಾಳಜಿ, ವಿದ್ಯುತ್‌, ನೀರು ಪೂರೈಕೆ, ಉದ್ಯೋಗ, ವಸತಿ, ಮಹಿಳಾ ಭದ್ರತೆ, ಹಿರಿಯರನ್ನು ಗೌರವಿಸುವುದು ಇದರಲ್ಲಿ ಸೇರಿದೆ’ ಎಂದರು.

ADVERTISEMENT

ದೆಹಲಿಯ ಎಲ್ಲಾ ಶಾಸಕರು ಜನಸಾಮಾನ್ಯರಂತೆಯೇ ಆಸ್ಪತ್ರೆಗಳಿಗೆ ತೆರಳಿ, ಸರದಿಯಲ್ಲಿ ನಿಂತು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.