ADVERTISEMENT

ದೇಶಿಯ ಕಂಪನಿ, ಸೇವೆಗೆ ಆದ್ಯತೆ ನೀಡುವ ನಿಯಮ ರೂಪಿಸಿ: ಸಂಸದ ವಿನಯ್ ಸಹಸ್ರಬುದ್ಧೆ

ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ಒತ್ತಾಯ

ಪಿಟಿಐ
Published 10 ಫೆಬ್ರುವರಿ 2021, 7:54 IST
Last Updated 10 ಫೆಬ್ರುವರಿ 2021, 7:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆರಿಕದ ಹೊಸ ಸರ್ಕಾರ ‘ದೇಶಿಯ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳಿಗೆ‘ ಆದ್ಯತೆ ನೀಡುತ್ತಿ ರುವ ಮಾದರಿಯಲ್ಲೇ ಭಾರತದಲ್ಲೂ ‘ಎಲ್ಲ ಒಪ್ಪಂದ, ವ್ಯವಹಾರಗಳಲ್ಲೂ ದೇಶಿಯ ಕಂಪನಿಗಳ ಉತ್ಪನ್ನಗಳು ಮತ್ತು ಸೇವೆಗಳಿಗೆ‘ ಆದ್ಯತೆ ನೀಡುವಂತೆ ನಿಯಮ ರೂಪಿಸಬೇಕು ಎಂದು ಸಂಸದರು ಬುಧವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ವಿನಯ್ ಪಿ ಸಹಸ್ರಬುದ್ಧೆ, ‘ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಅವರು, ‘ಅಮೆರಿಕದ ಕಂಪನಿಗಳು ತಯಾರಿಸುವ ಉತ್ಪನ್ನಗಳು ಮತ್ತು ಸೇವೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ನಮ್ಮ ದೇಶದಲ್ಲೂ ಇದೇ ಮಾದರಿ ಅನುಸರಿಸಬೇಕು‘ ಎಂದರು.

‘ಅನುಭವ ಹಾಗೂ ಇನ್ನಿತರ ಅರ್ಹತಾ ಮಾನದಂಡಗಳಿಂದಾಗಿ ಸ್ಥಳೀಯ ಸಲಹಾ ಸಂಸ್ಥೆಗಳಿಗೆ ಸಿಗಬೇಕಾದ ಆದ್ಯತೆ ವಿದೇಶಿ ಸಂಸ್ಥೆಗಳ ಪಾಲಾಗುತ್ತಿದೆ. ಇದರಿಂದ ಸ್ಥಳೀಯ ಕಂಪನಿಗಳು ನಷ್ಟ ಅನುಭವಿಸುತ್ತಿವೆ‘ ಎಂದು ಅವರು ತಿಳಿಸಿದರು.

ADVERTISEMENT

‘ಬೃಹದಾಕಾರವಾಗಿ ಬೆಳೆದಿರುವ ಕನ್ಸಲ್ಟೆನ್ಸಿ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳ ಪ್ರಾಬಲ್ಯ ಹೆಚ್ಚಾಗಿದೆ. ಕೈಗಾರಿಕಾ ಸಂಘಟನೆಯ ಅಸೋಚಾಮ್ ಪ್ರಕಾರ, ಈ ಕನ್ಸಲ್ಟೆನ್ಸಿ ಕಂಪನಿಗಳು 2020ರ ವಾರ್ಷಿಕ ವಹಿವಾಟು ₹27 ಸಾವಿರ ಕೋಟಿ. ಈ ಹಿನ್ನೆಲೆಯಲ್ಲಿ ದೇಶಿಯ ಕಂಪನಿಗಳಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ‘ ಎಂದು ಸಹಸ್ರಬುದ್ದೆ ಹೇಳಿದ್ದಾರೆ.

‘ಸಾರ್ವಜನಿಕ ನೀತಿ ಎಂಬುದು ಒಂದು ಆಕರ್ಷಕ ಕ್ಷೇತ್ರವಾಗಿದ್ದು, ಆ ಕ್ಷೇತ್ರದ ವ್ಯಾಪ್ತಿಗೆ ಬರುವ ಕನ್ಸಲ್ಟೆನ್ಸಿ ಕಂಪನಿಗಳಲ್ಲಿ ಶೇ 80ರಷ್ಟು ಪದವೀಧರರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ, ದೇಶಿಯ ಕನ್ಸಲ್ಟೆನ್ಸಿ ಕಂಪನಿಗೆ ಆದ್ಯತೆ ನೀಡಬೇಕು ಎಂಬ ನಿಯಮವನ್ನು ರೂಪಿಸುವುದು ಅಗತ್ಯವಾಗಿದೆ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.