ADVERTISEMENT

ಎಲ್ಗಾರ್‌ ಪರಿಷತ್‌ ಪ್ರಕರಣ: ಗೌತಮ್‌ ನವಲಖಾಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 13:42 IST
Last Updated 19 ಡಿಸೆಂಬರ್ 2023, 13:42 IST
ಗೌತಮ್‌ ನವಲಖಾ
ಗೌತಮ್‌ ನವಲಖಾ   

ಮುಂಬೈ: ಎಲ್ಗಾರ್‌ ಪರಿಷತ್‌ ಪ್ರಕರಣದ ಆರೋಪಿ, ಮಾನವಹಕ್ಕು ಹೋರಾಟಗಾರ ಮತ್ತು ಪತ್ರಕರ್ತ ಗೌತಮ್‌ ನವಲಖಾ ಅವರಿಗೆ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಜಾಮೀನು ನೀಡಿದೆ.

ನವಲಖಾ ಅವರನ್ನು ಎನ್‌ಐಎ 2020ರ ಏಪ್ರಿಲ್‌ 14ರಂದು ಬಂಧಿಸಿತ್ತು. ಮಾವೊವಾದಿಗಳ ಜತೆ ಸಂಪರ್ಕ ಹೊಂದಿರುವ ಆರೋಪ ಇವರ ಮೇಲಿತ್ತು. 

ನ್ಯಾಯಮೂರ್ತಿ ಎ.ಎಸ್‌. ಗಡ್ಕರಿ ಮತ್ತು ನ್ಯಾಯಮೂರ್ತಿ ಎಸ್‌.ಜಿ. ಡಿಗೆ  ಅವರನ್ನೊಳಗೊಂಡ ಪೀಠವು, ₹ 1 ಲಕ್ಷ ಭದ್ರತಾ ಠೇವಣಿ ಇಡಲು ಸೂಚಿಸಿ ಜಾಮೀನು ನೀಡಿತು.

ADVERTISEMENT

ಆದರೆ, ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್‌ಗೆ  ಮೇಲ್ಮನವಿ ಸಲ್ಲಿಸಲು  ಎನ್‌ಐಎ ಅವಕಾಶ ಕೋರಿದ್ದರಿಂದ ಜಾಮೀನು ಆದೇಶವನ್ನು ಮೂರು ವಾರಗಳವರೆಗೆ ತಡೆಹಿಡಿಯಿತು. ನವೆಂಬರ್‌ನಲ್ಲಿ ನವಲಖಾ ಅವರನ್ನು ಗೃಹ ಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆಗಿನಿಂದ ಅವರು ನವಿ ಮುಂಬೈನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.