ADVERTISEMENT

ಕೋಲ್ಕತ್ತ: ಹನುಮಾನ್‌ ಜಯಂತಿ ಅಂಗವಾಗಿ ಭದ್ರತೆ ಪರಿಶೀಲಿಸಿದ ರಾಜ್ಯಪಾಲ

ಪಿಟಿಐ
Published 6 ಏಪ್ರಿಲ್ 2023, 19:30 IST
Last Updated 6 ಏಪ್ರಿಲ್ 2023, 19:30 IST
 ಹನುಮಾನ್‌ ಜಯಂತಿ ಅಂಗವಾಗಿ ಸಿಆರ್‌ಪಿಎಫ್‌ ಯೋಧರು ಕೋಲ್ಕತ್ತದಲ್ಲಿ ಗುರುವಾರ ಪಥಸಂಚಲನ ನಡೆಸಿದರು –ಪಿಟಿಐ ಚಿತ್ರ
 ಹನುಮಾನ್‌ ಜಯಂತಿ ಅಂಗವಾಗಿ ಸಿಆರ್‌ಪಿಎಫ್‌ ಯೋಧರು ಕೋಲ್ಕತ್ತದಲ್ಲಿ ಗುರುವಾರ ಪಥಸಂಚಲನ ನಡೆಸಿದರು –ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್‌ ಅವರು ಗುರುವಾರ ಕೋಲ್ಕತ್ತದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಹನುಮಾನ್‌ ಜಯಂತಿ ಆಚರಣೆಯ ಅಂಗವಾಗಿ ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.

ಬಾಲ ಹನುಮಾನ್‌ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಅವರು, ಭದ್ರತಾ ಸಿಬ್ಬಂದಿ, ವ್ಯಾಪಾರಸ್ಥರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿವೆ.

‘ನೋಡಿ ನನ್ನನ್ನು ರಾಜ್ಯಪಾಲರನ್ನಾಗಿ ಮಾಡಿದ್ದು ಜನ. ಹಾಗಾಗಿ ನಾನು ಅವರೊಂದಿಗೆ ಇರಬೇಕು’ ಎಂದು ಆನಂದ ಬೋಸ್‌ ಅವರು ಎಕ್ಬಾಲ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಈ ಪ್ರದೇಶದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋಮು ಹಿಂಸಾಚಾರ ನಡೆದಿತ್ತು.

ADVERTISEMENT

ರಾಮ ನವಮಿ ಆಚರಣೆ ವೇಳೆ ಹೂಗ್ಲಿ ಮತ್ತು ಹೌರಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದ ಕಾರಣ ಹನುಮಾನ್‌ ಜಯಂತಿಯ ಅಂಗವಾಗಿ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.