ADVERTISEMENT

ನಿಸ್ವಾರ್ಥ ಚಿಂತನೆಯ ಒಕ್ಕೂಟಕ್ಕೆ ಬೆಂಬಲ: ಕಮಲ್‌ ಹಾಸನ್‌

ಪಿಟಿಐ
Published 21 ಫೆಬ್ರುವರಿ 2024, 15:40 IST
Last Updated 21 ಫೆಬ್ರುವರಿ 2024, 15:40 IST
ಕಮಲ್‌ ಹಾಸನ್‌
ಕಮಲ್‌ ಹಾಸನ್‌   

ಚೆನ್ನೈ: ರಾಷ್ಟ್ರಕ್ಕಾಗಿ ನಿಸ್ವಾರ್ಥ ಚಿಂತನೆ ಹೊಂದಿರುವ ಒಕ್ಕೂಟಕ್ಕೆ ‘ಮಕ್ಕಳ್‌ ನೀಧಿ ಮೈಯಂ’(ಎಂಎನ್‌ಎಂ) ಪಕ್ಷವು ಬೆಂಬಲ ಸೂಚಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್‌ ಹಾಸನ್‌ ಅವರು ಬುಧವಾರ ತಿಳಿಸಿದರು.

ಎಂಎನ್‌ಎಂನ 7ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ತಮಿಳು ನಟ ವಿಜಯ್‌ ರಾಜಕೀಯಕ್ಕೆ ಪ್ರವೇಶಿಸಿರುವುದನ್ನು ಸ್ವಾಗತಿಸಿದರು.

ಊಳಿಗಮಾನ್ಯ ರಾಜಕೀಯ ಮಾಡುವ ಪಕ್ಷಗಳ ಜೊತೆ ಕೈಜೋಡಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ADVERTISEMENT

‘ಇಂಡಿಯಾ’ ಒಕ್ಕೂಟಕ್ಕೆ ಸೇರಿದ್ದಿರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು, ಇದುವರೆಗೆ ಸೇರಿಲ್ಲ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಜೊತೆಗೆ ಎಂಎನ್‌ಎಂ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಲ್‌ ಹಾಸನ್‌, ‘ಚರ್ಚೆ ನಡೆಯುತ್ತಿದೆ. ಶುಭಸುದ್ದಿ ಇದ್ದರೆ ತಿಳಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.