ADVERTISEMENT

ಗೋವಾದಲ್ಲಿ ಟಿಎಂಸಿ ಕಣಕ್ಕಿಳಿದ ಬಳಿಕ 10 ಬಾರಿ ಇ.ಡಿ ಸಮನ್ಸ್: ಅಭಿಷೇಕ್ ಬ್ಯಾನರ್ಜಿ

ಪಿಟಿಐ
Published 11 ಫೆಬ್ರುವರಿ 2022, 2:53 IST
Last Updated 11 ಫೆಬ್ರುವರಿ 2022, 2:53 IST
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ   

ಪಣಜಿ: ಗೋವಾದಲ್ಲಿ ತಮ್ಮ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಬಳಿಕ ಬಿಜೆಪಿಯ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ (ಇ.ಡಿ) ತನಗೆ ಎಂಟರಿಂದ 10 ಸಲ ಸಮನ್ಸ್ ಜಾರಿ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

ಗೋವಾದಲ್ಲಿ ಫೆಬ್ರುವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:

ಗೋವಾದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿರುವ ಟಿಎಂಸಿ ವಿರುದ್ಧ ಬಿಜೆಪಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಟಿಎಂಸಿ ಗೋವಾಗೆ ಪ್ರವೇಶಿಸಿದ ನಂತರ ಬಿಜೆಪಿಯ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯ ನನಗೆ ಎಂಟರಿಂದ 10 ಬಾರಿ ಸಮನ್ಸ್ ಜಾರಿ ಮಾಡಿದೆ ಎಂದು ಹೇಳಿದರು.

ADVERTISEMENT

'ನಾನಿಲ್ಲಿ ನಿಂತು ಹೇಳುತ್ತಿದ್ದೇನೆ, ಬಿಜೆಪಿ ಎಷ್ಟೇ ಬೆದರಿಸಿದರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಬದುಕಿರುವವರೆಗೂ, ನನ್ನ ರಕ್ತನಾಳಗಳಲ್ಲಿ ರಕ್ತ ಹರಿಯುವವರೆಗೂ, ನಾನು ನಿಮ್ಮ ಹಕ್ಕುಗಳಿಗಾಗಿ ಹೋರಾಡುತ್ತಲೇ ಇರುತ್ತೇನೆ' ಎಂದಿದ್ದಾರೆ.

ಈ ವೇಳೆ ಬಿಜೆಪಿಯಿಂದ ಹಣ ತೆಗೆದುಕೊಳ್ಳಿ, ಆದರೆ ಟಿಎಂಸಿಗೆ ಮತ ನೀಡಿ ಎಂದು ಅಭಿಷೇಕ್ ಬ್ಯಾನರ್ಜಿ ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

'ನೀವು ಬಿಜೆಪಿಯಿಂದ ಹಣ ತೆಗೆದುಕೊಳ್ಳಿ, ಆದರೆ ಟಿಎಂಸಿಗೆ ಮತ ಹಾಕಿ. 2017ರಲ್ಲಿ ಗೋವಾದವರಿಗೆ ದ್ರೋಹ ಮಾಡಿದಂತೆ ಬಿಜೆಪಿಗೆ ದ್ರೋಹ ಮಾಡಿ' ಎಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.