ADVERTISEMENT

ಬಂಡಾಯ ಶಾಸಕರನ್ನು ಹೈಕಮಾಂಡ್ ‌ಕ್ಷಮಿಸಿದರೆ ನಾನು ಒಪ್ಪುವೆ: ಗೆಹ್ಲೋಟ್‌

ಪಿಟಿಐ
Published 1 ಆಗಸ್ಟ್ 2020, 21:07 IST
Last Updated 1 ಆಗಸ್ಟ್ 2020, 21:07 IST
ಗೆಹ್ಲೋಟ್‌
ಗೆಹ್ಲೋಟ್‌   

ಜೈಸಲ್ಮೇರ್/ ಜೈಪುರ: ‘ಬಂಡಾಯ ಶಾಸಕರನ್ನು ಹೈಕಮಾಂಡ್‌ ಕ್ಷಮಿಸಿದರೆ, ನಾನು ತಬ್ಬಿಕೊಳ್ಳುವೆ’ ಎಂದುಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್ ಹೇಳಿದ್ದಾರೆ.

ಪಕ್ಷದ ನಿಷ್ಠ ಐವತ್ತು ಶಾಸಕರನ್ನು ಸ್ಥಳಾಂತರಿಸಿರುವ ಜೈಸಲ್ಮೇರ್‌ನ ಹೋಟೆಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಿನ್ನಮತೀಯರನ್ನು ಕ್ಷಮಿಸುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಷಯ’ ಎಂದಿದ್ದಾರೆ.

‘ಬಂಡಾಯ ಶಾಸಕರಿಗೆ ಈಗಲೂ ಪಕ್ಷದ ಬಾಗಿಲು ತೆರೆದಿದೆ. ಅವರು ಸ್ವ ಇಚ್ಛೆಯಿಂದ ಪಕ್ಷಕ್ಕೆ ಮರಳಬಹುದು’ ಎಂದಿದ್ದಾರೆ.

ADVERTISEMENT

‘ನಮಗೆ ಯಾರೊಂದಿಗೂ ವೈಯಕ್ತಿಕ ಜಗಳವಿಲ್ಲ. ಪ್ರಜಾಪ್ರಭುತ್ವದಲ್ಲಿ ತತ್ವ ಸಿದ್ಧಾಂತ, ನೀತಿಗಳು ಮತ್ತು ಕಾರ್ಯಕ್ರಮಗಳ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಆದರೆ, ಸರ್ಕಾರವನ್ನು ಪತನಗೊಳಿಸಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.