ಭಾರತದಿಂದ ಮ್ಯಾನ್ಮಾರ್ಗೆ 2 ಸಾವಿರ ಮೆಟ್ರಿಕ್ ಟನ್ ಅಕ್ಕಿ ಮಾನವೀಯ ನೆರವು ರವಾನೆ
ಚತ್ರಕೃಪೆ: @MEAIndia
ನವದೆಹಲಿ: ‘ಪೂರ್ವದತ್ತ ಚಿತ್ತ’ (ಆ್ಯಕ್ಟ್ ಈಸ್ಟ್), ‘ನೆರೆಹೊರೆಯವರೇ ಮೊದಲು’ (ನೈಬರ್ಹೂಡ್ ಫರ್ಸ್ಟ್) ನೀತಿಯಡಿ ಮಾನವೀಯ ನೆರವಿನ ಭಾಗವಾಗಿ ಭಾರತವು ಮ್ಯಾನ್ಮಾರ್ಗೆ 2,200 ಮೆಟ್ರಿಕ್ ಟನ್ಗಳಷ್ಟು ಅಕ್ಕಿಯನ್ನು ರವಾನಿಸಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಮ್ಯಾನ್ಮಾರ್ ಜನರಿಗೆ ಮಾನವೀಯ ನೆರವು ನೀಡುವ ತನ್ನ ಬದ್ಧತೆಯನ್ನು ಭಾರತವು ಪುನರುಚ್ಚರಿಸುತ್ತದೆ. ಹೀಗಾಗಿ 2,200 ಮೆಟ್ರಿಕ್ ಟನ್ ಅಕ್ಕಿಯ ಸರಕು ಶನಿವಾರ ಮ್ಯಾನ್ಮಾರ್ಗೆ ಚೆನ್ನೈ ಬಂದರಿನಿಂದ ಹೊರಟಿದೆ’ ಎಂದಿದ್ದಾರೆ.
ಕಳೆದ ವಾರ ವಿಶ್ವಸಂಸ್ಥೆಯ ಸುದ್ದಿ ಸಂಸ್ಥೆ, ಮ್ಯಾನ್ಮಾರ್ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ಮ್ಯಾನ್ಮಾರ್ನಲ್ಲಿ ನೆಲಬಾಂಬ್ ಸ್ಫೋಟದಿಂದ ಪ್ರತಿವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2023ರಲ್ಲಿ ಸಾವಿರಕ್ಕೂ ಹೆಚ್ಚು ಜನ ಬಲಿಪಶುಗಳಾಗಿದ್ದಾರೆ. ಇದರ ಪರಿಣಾಮ ನಾಗರಿಕರು ಬಿಕ್ಕಟ್ಟಿಗೆ ಸಿಲುಕಿದ್ದಾರೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.