ADVERTISEMENT

ಸಂದರ್ಶನ ನಿರಾಕರಿಸಿದ್ದಕ್ಕೆ ಪತ್ರಕರ್ತನಿಂದ ಬೆದರಿಕೆ: ಸಹಾ ಬೆನ್ನಿಗೆ ನಿಂತ ಐಸಿಎ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2022, 14:02 IST
Last Updated 22 ಫೆಬ್ರುವರಿ 2022, 14:02 IST
ವೃದ್ಧಿಮಾನ್‌ ಸಹಾ
ವೃದ್ಧಿಮಾನ್‌ ಸಹಾ    

ನವದೆಹಲಿ: ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಪತ್ರಕರ್ತರೊಬ್ಬರು ಬೆದರಿಕೆ ಹಾಕಿರುವುದನ್ನು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಮಂಗಳವಾರ ಖಂಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಎ, ಪ್ರಕರಣದಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬೇಕು ಸಂಸ್ಥೆ ಒತ್ತಾಯಿಸಿದೆ.

ಕ್ರಿಕೆಟ್‌ ಮತ್ತು ಆಟಗಾರರ ಬೆಳವಣಿಗೆಯಲ್ಲಿ ಮಾಧ್ಯಮಗಳು ಬಹುಮುಖ್ಯ ಪಾತ್ರ ವಹಿಸಿವೆ. ಆದರೆ, ಯಾರು ತಮ್ಮ ಪರಿಮಿತಿಗಳನ್ನು ಮೀರಬಾರದು. ವೃದ್ಧಿಮಾನ್‌ ಸಹಾ ಅವರ ವಿಚಾರದಲ್ಲಿ ಆಗಿರುವ ಘಟನೆ ಒಪ್ಪುವಂಥದ್ದಲ್ಲ. ಪತ್ರಕರ್ತರ ಸಂಘಟನೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬೇಕು.

ADVERTISEMENT

‘ತಪ್ಪು ಮಾಡಿದ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ, ಬಿಸಿಸಿಐನ ಕಾರ್ಯಕ್ರಮಗಳಿಗೆ ಪ್ರವೇಶವನ್ನು ನಿರಾಕರಿಸುವ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದ್ದೇ ಆದರೆ, ಸಂಸ್ಥೆಯು ಅದನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ‘ ಎಂದು ಅಧ್ಯಕ್ಷ ಅಶೋಕ್ ಮಲ್ಹೋತ್ರಾ ಹೇಳಿದ್ದಾರೆ.‌

ಈ ಪ್ರಕರಣದಲ್ಲಿ ಸಂಸ್ಥೆಯು ವೃದ್ಧಿಮಾನ್‌ ಸಹಾ ಅವರ ಪರವಾಗಿ ನಿಲ್ಲಲಿದೆ ಎಂದೂ ಅವರು ತಿಳಿಸಿದ್ದಾರೆ.

ಸಂದರ್ಶನ ನೀಡಲು ನಿರಾಕರಿಸಿದ ನಂತರ ‘ಗೌರವಾನ್ವಿತ’ ಪತ್ರಕರ್ತರೊಬ್ಬರು ಜೋರುಧ್ವನಿಯಲ್ಲಿ ಬೆದರಿಕೆ ಒಡ್ಡಿದ್ದಾರೆ ಎಂದು ಸಹಾ ಟ್ವಿಟರ್‌ನಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.