ADVERTISEMENT

ದೇಶದ ಆರ್ಥಿಕತೆ ಹೆಚ್ಚು ಬಲಿಷ್ಠವಾಗಿ ಚೇತರಿಸಿಕೊಂಡಿದೆ: ಮೋದಿ

ಪಿಟಿಐ
Published 11 ಸೆಪ್ಟೆಂಬರ್ 2021, 11:51 IST
Last Updated 11 ಸೆಪ್ಟೆಂಬರ್ 2021, 11:51 IST
‘ಸರ್ಧಾರ್‌ಧಾಮ್‌ ಭವನ’  ಭವನವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ                     –ಪಿಟಿಐ ಚಿತ್ರ
‘ಸರ್ಧಾರ್‌ಧಾಮ್‌ ಭವನ’  ಭವನವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಶನಿವಾರ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ                     –ಪಿಟಿಐ ಚಿತ್ರ   

ಅಹಮದಾಬಾದ್: ‘ಕೋವಿಡ್‌–19ನಿಂದ ಉಂಟಾದ ಪರಿಣಾಮವನ್ನು ಹೋಲಿಸಿದರೆ, ದೇಶದ ಆರ್ಥಿಕತೆಯು ಅತಿ ಹೆಚ್ಚು ವೇಗದಲ್ಲಿ ಚೇತರಿಸಿಕೊಂಡಿದೆ. ವಿಶ್ವದ ದೊಡ್ಡ ದೇಶಗಳು ಸಾಂಕ್ರಾಮಿಕದಿಂದ ತಮ್ಮನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಭಾರತವು ಸುಧಾರಣಾ ಕಾರ್ಯಗಳಲ್ಲಿ ನಿರತವಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

‘ಸರ್ಧಾರ್‌ಧಾಮ್‌ ಭವನ’ವನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,‘ ಕೋವಿಡ್‌–19 ಭಾರತ ಸೇರಿದಂತೆ ಸಂಪೂರ್ಣ ವಿಶ್ವದ ಮೇಲೆ ಪರಿಣಾಮ ಬೀರಿತು. ಆದರೆ, ನಮ್ಮ ಆರ್ಥಿಕತೆಯು ಸಾಂಕ್ರಾಮಿಕದಿಂದ ಉಂಟಾದ ಪರಿಣಾಮಕ್ಕಿಂತ ಬಲಿಷ್ಠವಾಗಿ ಚೇತರಿಸಿಕೊಂಡಿದೆ’ ಎಂದರು.

‘ಜಾಗತಿಕ ಪೂರೈಕೆ ಸರಪಳಿಗಳು ಅಸ್ತ್ರವ್ಯಸ್ತಗೊಂಡಿರುವ ಸಮಯದಲ್ಲಿ ನಾವು ಉತ್ಪಾದನೆ ಆಧಾರಿತ ಉತ್ತೇಜನಾ ಯೋಜನೆ’ಯನ್ನು (‍ಪಿಎಲ್‌ಐ)‍ ಪರಿಚಯಿಸುವ ಮೂಲಕ ಹೊಸ ಅವಕಾಶಗಳನ್ನು ಕಲ್ಪಿಸಿದೆವು. ಈ ಯೋಜನೆಯನ್ನು ಜವಳಿ ಕ್ಷೇತ್ರಕ್ಕೆ ವಿಸ್ತರಿಸಲಾಗಿದ್ದು, ಸೂರತ್‌ನಂತಹ ನಗರಗಳು ಈ ಯೋಜನೆಯ ಗರಿಷ್ಠ ಲಾಭವನ್ನು ಪಡೆಯಬಹುದು’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.