ADVERTISEMENT

ರೋಹಿತ್ ಖೇಲ್ ರತ್ನ; ರೈ, ಜೂಡ್ ದ್ರೋಣಾಚಾರ್ಯ

ಪಿಟಿಐ
Published 21 ಆಗಸ್ಟ್ 2020, 20:55 IST
Last Updated 21 ಆಗಸ್ಟ್ 2020, 20:55 IST
   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರಿಗೆ ರಾಜೀವಗಾಂಧಿ ಖೇಲ್‌ ರತ್ನ ಪ್ರಶಸ್ತಿ ಒಲಿದಿದೆ.

ಕರ್ನಾಟಕದ ಹಿರಿಯ ಅಥ್ಲೆಟಿಕ್ ಕೋಚ್ ಪುರುಷೋತ್ತಮ್ ರೈ ಮತ್ತು ಹಾಕಿ ಕೋಚ್ ಜೂಡ್ ಫೆಲಿಕ್ಸ್‌ ಅವರು ದ್ರೋಣಾಚಾರ್ಯ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಕೇಂದ್ರ ಕ್ರೀಡಾ ಇಲಾಖೆಯು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ. ರಾಜ್ಯದ ಗಾಲ್ಫ್‌ ಪಟು ಅದಿತಿ ಅಶೋಕ್ ಅವರಿಗೆ ಅರ್ಜುನ ಪ್ರಶಸ್ತಿ ಸಂದಿದೆ.

ADVERTISEMENT

ಎಂಟು ಮಂದಿ ಹಿರಿಯ ಕ್ರೀಡಾಪಟುಗಳಿಗೆ ಜೀವಮಾನ ಸಾಧನೆಗಾಗಿ ಮೇಜರ್ ಧ್ಯಾನಚಂದ್ ಪುರಸ್ಕಾರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.