ADVERTISEMENT

ಆಂಧ್ರಪ್ರದೇಶ ಉಳಿಸಲು ಇದುವೇ ಕೊನೆಯ ಅವಕಾಶ: ಚಂದ್ರಬಾಬು ನಾಯ್ಡು

ಐಎಎನ್ಎಸ್
Published 30 ನವೆಂಬರ್ 2022, 16:04 IST
Last Updated 30 ನವೆಂಬರ್ 2022, 16:04 IST
ಎನ್. ಚಂದ್ರಬಾಬು ನಾಯ್ಡು
ಎನ್. ಚಂದ್ರಬಾಬು ನಾಯ್ಡು   

ಅಮರಾವತಿ: ಆಂಧ್ರಪ್ರದೇಶದ ಜನರಿಗೆ ಇದುವೇ ಕೊನೆಯ ಅವಕಾಶವಾಗಿದ್ದು, ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು (ವೈಎಸ್‌‌ಆರ್‌ಸಿಪಿ) ಅಧಿಕಾರದಿಂದ ಕೆಳಗಿಳಿಸುವ ಮೂಲಕ ರಾಜ್ಯವನ್ನು ಉಳಿಸಬೇಕು ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಮನವಿ ನೀಡಿದ್ದಾರೆ.

ನನಗಾಗಿ ಅಲ್ಲ, ರಾಜ್ಯದ ಜನತೆಗೆ ಇದುವೇ ಕೊನೆಯ ಅವಕಾಶ. ಅಧಿಕಾರ ನನಗೇನು ಹೊಸದೇನಲ್ಲ. ಆಂಧ್ರಪ್ರದೇಶದಲ್ಲಿ ನಾನು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಕಳೆದ 40 ವರ್ಷಗಳಿಂದ ರಾಜಕೀಯರಂಗದಲ್ಲಿದ್ದೇನೆ. ನಾನು ಹೊಸದಾಗಿ ಸಾಧಿಸಲು ಏನೂ ಇಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕರೂ ಆದ ಚಂದ್ರಬಾಬು ನಾಯ್ಡು ಹೇಳಿದರು.

ಮಹಿಳೆಯರು ಸೇರಿದಂತೆ ನನ್ನ ಸಭೆಯಲ್ಲಿ ಭಾಗವಹಿಸುವ ಜನರ ಮೇಲೆ ಸಿಎಂ ಜಗನ್ ಮೋಹನ್ ರೆಡ್ಡಿ ಮತ್ತವರ ಸರ್ಕಾರವು ಸವಲತ್ತುಗಳನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದರು.

ಜಗನ್‌ ಮೋಹನ್‌ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ವಿಚಾರಣೆಯನ್ನು ಹೈದರಾಬಾದ್‌ನಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿರುವುದನ್ನು ಉಲ್ಲೇಖಿಸಿರುವ ಚಂದ್ರಬಾಬು ನಾಯ್ಡು, ಅಧಿಕಾರದಲ್ಲಿ ಮುಂದುವರಿಯಲು ಜಗನ್ ಮೋಹನ್‌ ರೆಡ್ಡಿಗೆ ನೈತಿಕತೆಯಿಲ್ಲ ಎಂದು ಹೇಳಿದರು.

ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದ ಜಗನ್ ಮೋಹನ್ ರೆಡ್ಡಿ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.