ಸ್ವಿಟ್ಜರ್ಲ್ಯಾಂಡ್: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಿ ವಿಮಾನಗಳ ಹಾರಾಟ ರದ್ದುಗೊಳಿಸಿದ ನಂತರ ತಮ್ಮ ದೇಶಕ್ಕೆ ಮರಳದೇ ಕೇರಳದಲ್ಲಿ ಉಳಿದುಕೊಂಡಿದ್ದ 164 ಸ್ವಿಟ್ಜರ್ಲೆಂಡ್ ಪ್ರಜೆಗಳನ್ನು ಶನಿವಾರ ವಾಪಸ್ಸು ಕಳುಹಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೊನೆಯ ತಿಂಗಳು ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಆ ಕಾರಣ, ತಮ್ಮ ದೇಶಕ್ಕೆ ವಾಪಸ್ಸು ಮರಳದೇ ಕೇರಳದಲ್ಲಿಯೇ ಸ್ವಿಟ್ಜರ್ಲೆಂಡ್ ಪ್ರಜೆಗಳು ಉಳಿದುಕೊಂಡಿದ್ದರು.
ಕೇರಳದಲ್ಲಿ ಉಳಿದುಕೊಂಡಿದ್ದ 164 ಸ್ವಿಟ್ಜರ್ಲೆಂಡ್ ಪ್ರಜೆಗಳನ್ನು ಸ್ವಿಸ್ ವಿಮಾನವು ಶನಿವಾರ ಕೊಚ್ಚಿನ್ ವಿಮಾನ ನಿಲ್ದಾಣದಿಂದ ಕರೆದೊಯ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.