ADVERTISEMENT

ನಷ್ಟದಲ್ಲಿರುವ ಎಂಎಸ್‌ಆರ್‌ಟಿಸಿಗೆ ₹1,000 ಕೋಟಿ ಪ್ಯಾಕೆಜ್‌

ಪಿಟಿಐ
Published 10 ನವೆಂಬರ್ 2020, 15:21 IST
Last Updated 10 ನವೆಂಬರ್ 2020, 15:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನಷ್ಟದಲ್ಲಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ(ಎಂಎಸ್‌ಆರ್‌ಟಿಸಿ) ಮುಂದಿನ ಆರು ತಿಂಗಳಿಗೆ ಒಟ್ಟು ₹1,000 ಕೋಟಿ ಆರ್ಥಿಕ ಸಹಾಯದ ಪ್ಯಾಕೆಜ್‌ ಅನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಘೋಷಿಸಿದೆ.

‘ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಜೊತೆ ಚರ್ಚೆ ನಡೆಸಿದ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಈ ಪ್ಯಾಕೆಜ್‌ ಘೋಷಿಸಿದ್ದಾರೆ. ಈ ಪ್ಯಾಕೆಜ್‌ ಮುಂದಿನ ಆರು ತಿಂಗಳು ಸಿಬ್ಬಂದಿಯ ವೇತನ ಹಾಗೂ ಎಂಎಸ್‌ಆರ್‌ಟಿಸಿಯ ಇಂಧನದ ಖರ್ಚಿಗೆ ನೆರವಾಗಲಿದೆ’ ಎಂದು ಸಾರಿಗೆ ಸಚಿವ ಅನಿಲ್‌ ಪರಬ್‌ ತಿಳಿಸಿದರು. ‌

‘ಕೋವಿಡ್‌–19 ಲಾಕ್‌ಡೌನ್‌ ಕಾರಣದಿಂದಾಗಿ ಎಂಎಸ್‌ಆರ್‌ಟಿಸಿಗೆ ₹3 ಸಾವಿರ ಕೋಟಿ ನಷ್ಟವಾಗಿತ್ತು. ಇದರಿಂದಾಗಿ ಸಿಬ್ಬಂದಿಯ ವೇತನವನ್ನೂ ನೀಡುವುದು ಕಷ್ಟವಾಗಿತ್ತು. ಪ್ರಸ್ತುತ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ನಿಗಮವೂ ಮತ್ತೆ ಹಳಿಗೆ ಬರಲಿದೆ. ದೀಪಾವಳಿ ಮುಂಚಿತವಾಗಿ ಬಾಕಿ ಇರುವ ಎಲ್ಲ ವೇತನವನ್ನು ನೌಕರರಿಗೆ ನೀಡಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.