ADVERTISEMENT

ಮಹದಾಯಿ ತೀರ್ಪು: ಗೋವಾ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದ ವಿರೋಧ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 12:29 IST
Last Updated 21 ಫೆಬ್ರುವರಿ 2020, 12:29 IST
   

ಪಣಜಿ:ಮಹದಾಯಿ ವಿಚಾರದಲ್ಲಿ ಗೋವಾ ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಗೋವಾಬಿಜೆಪಿ ಸರ್ಕಾರವನ್ನು ಟೀಕಿಸಿದವೆ.

ಮಹದಾಯಿ ನ್ಯಾಯಾಧಿಕರಣ ಮಂಡಳಿ ನೀಡಿರುವ ಅಂತಿಮ ಐ ತೀರ್ಪನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದ್ದು, ಐ ತೀರ್ಪಿಗೆ ಅನುಗುಣವಾಗಿ ಮಹದಾಯಿ ನದಿ ನೀರನ್ನು ಹಂಚಿಕೊಳ್ಳುವಂತೆ ಮಧ್ಯಂತರ ತೀರ್ಪು ನೀಡಿದೆ.

ಸುಪ್ರೀಂ ತೀರ್ಪಿನ ಬಗ್ಗೆ ಪಕ್ಷವು ಪತ್ರಿಕಾಗೊಷ್ಠಿ ನಡೆಸಲಿದೆ ಎಂದುಬಿಜೆಪಿ ವಕ್ತಾರ ದತ್ತಪ್ರಸಾದ್ ನಾಯ್ಕ್‌ ಹೇಳಿದ್ದು, ಗೋವಾಗೆ ಕರಾಳ ದಿನ ಎಂದು ವಿರೋದ ಪಕ್ಷದ ನಾಯಕ ದಿಗಂಬರ ಕಾಮತ್ ಹೇಳಿದ್ದಾರೆ.

ADVERTISEMENT

ಮಹದಾಯಿ ಪ್ರಕರಣದಲ್ಲಿಸುಪ್ರೀಂತೀರ್ಪಿನ ಬಗ್ಗೆ ರಾಜ್ಯಸರ್ಕಾರಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದುಕಾಮತ್ಅವರು ಟೀಕಿಸಿದ್ದಾರೆ.

ಸುಪ್ರೀಂತೀರ್ಪು ನಮ್ಮ ಜೀವನದಿಮಹದಾಯಿಯನೀರನ್ನು ಕರ್ನಾಟಕಕ್ಕೆ ನೀಡುವಾಗ ಗೋವಾಸರ್ಕಾರಮೌನವಾಗಿದೆಇಂದು ರಾಜ್ಯಕ್ಕೆ ಕರಾಳದಿನ ಎಂದು ಅವರು ಗೋವಾ ಸರ್ಕಾರವನ್ನು ಟೀಕಿಸಿದರು.

ಮಹದಾಯಿ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿ ಸರ್ಕಾರದ ವಿರುದ್ಧ ಜನಾಂದೋಲನವನ್ನು ನಾವು ಇನ್ನಷ್ಟು ತೀವ್ರಗೊಳಿಸಲಿದ್ದೇವೆಎಂದು ಕಾಮತ್ ಹೇಳಿದ್ದಾರೆ.

ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಗೋವಾ,ಮಹಾರಾಷ್ಟ್ರಮತ್ತು ಕರ್ನಾಟಕ ರಾಜ್ಯಗಳ ನಡುವೆ ಕಾನೂನು ಸಮರ ನಡೆಯುತ್ತಿದೆ.

ಗೋವಾದ ಬಿಜೆಪಿ ಸರ್ಕಾರವು ಕರ್ನಾಟಕ ಸರ್ಕಾರದ ಕೈ ಗೊಂಬೆಯಂತೆಕಾರ್ಯನಿರ್ವಹಿಸುತ್ತಿದೆಎಂದು ಗೋವಾ ಫವರ್ಡ್‌ ಪಾರ್ಟಿಯ ಅಧ್ಯಕ್ಷ ವಿಜಯ್‌ಸರ್ದೇಸಾಯಿಆರೋಪಿಸಿದ್ದಾರೆ.

ಮಹದಾಯಿನ್ಯಾಯಾಧಿಕರಣಮಂಡಳಿಯ ತೀರ್ಪನ್ನುಜಾರಿಗೊಳಿಸುವಂತೆಕರ್ನಾಟಕಸರ್ಕಾರಕೇಳಿಕೊಂಡಿದ್ದಾಗ, ಗೋವಾ ಸರ್ಕಾರ ಯಾವುದೇ ತಕರಾರು ಅರ್ಜಿ ಸಲ್ಲಿಸಲಿಲ್ಲ,ಆದ್ದರಿಂದಕರ್ನಾಟಕವು ಅಧಿಕೃತವಾಗಿ ಕಳಸಾ–ಬಂಡೂರಿ ಯೋಜನೆಯನ್ನು ಮುಂದುವರಿಸಬಹುದು ಎಂದುಬಸವರಾಜ ಬೊಮ್ಮಾಯಿ(ಕರ್ನಾಟಕ ನೀರಾವರಿ ಸಚಿವ)ಅವರಿಗೆಪ್ರಕಾಶ್ಜಾವ್ಡೇಕರ್‌ 24/12/19 ರಂದು ನೀಡಿರುವ ಪತ್ರ ಸಹಿತಸರ್ದೇಸಾಯಿಟ್ವೀಟ್ಮಾಡಿದ್ದಾರೆ.

ಮಹದಾಯಿ ವಿಚಾರದಲ್ಲಿ ಬಿಜೆಪಿ ಸರ್ಕಾರವು ರಾಜ್ಯಕ್ಕೆ ವಿಶ್ವಾಸದ್ರೋಹ ಮಾಡಿದ್ದು, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ರಾಜಿನಾಮೆ ನೀಡಬೇಕು ಎಂದು ಎಎಪಿ ಆಗ್ರಹಿಸಿದೆ.

ಮಹದಾಯಿ ಹೋರಾಟದ ಎಲ್ಲ ಹಂತಗಳಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರ್ಕಾರವು ವಿಫಲವಾಗಿದೆ ಎಂದು ಎಎಪಿ ವಕ್ತಾರ ವಾಲ್ಮೀಕಿ ನಾಯ್ಕ್‌ ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.