ADVERTISEMENT

ಮಂಜೂರಾದ ಭೂಮಿಯ ದಾಖಲೆ ಕೊಡದ ಅಧಿಕಾರಿಗಳು: ಮಣ್ಣಡಿ ಹುಗಿದುಕೊಂಡು ರೈತ ಪ್ರತಿಭಟನೆ

ಮಹಾರಾಷ್ಟ್ರದ ರೈತನಿಂದ ವಿಚಿತ್ರ ಪ್ರತಿಭಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2023, 11:33 IST
Last Updated 3 ಜನವರಿ 2023, 11:33 IST
ಮಣ್ಣಿನಡಿ ಹುದುಗಿ ಪ್ರತಿಭಟಿಸುತ್ತಿರುವ ರೈತ
ಮಣ್ಣಿನಡಿ ಹುದುಗಿ ಪ್ರತಿಭಟಿಸುತ್ತಿರುವ ರೈತ   

ಮುಂಬೈ: ಯೋಜನೆಯೊಂದರಲ್ಲಿ ತನಗೆ ಮಂಜೂರಾದ ಭೂಮಿಯ ದಾಖಲೆ ಪತ್ರಗಳು ತನ್ನ ಹೆಸರಿಗೆ ಆಗುವುದರಲ್ಲಿ ವಿಳಂಬ ಆಗುತ್ತಿರುವುದಕ್ಕೆ ರೈತರೊಬ್ಬರು ಅರೆ ಸಮಾಧಿಯಾಗಿ ಪ್ರತಿಭಟನೆ ನಡೆಸಿದ ವಿಕ್ಷಿಪ್ತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಜಲ್ನಾ ಜಿಲ್ಲೆಯ ಸುನಿಲ್ ಜಾಧವ್‌ ಎನ್ನುವವರೇ ಹೀಗೆ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ರೈತ.

ಸುನಿಲ್ ಅವರಿಗೆ, ಕರ್ಮವೀರ್‌ ದಾದಾಸಾಹೇಬ್‌ ಗಾಯಕ್ವಾಡ್‌ ಸಬಲೀಕರಣ್‌ ಸ್ವಾಭಿಮಾನ್ ಯೋಜನೆಯಡಿ 2 ಎಕರೆ ಭೂಮಿ 2019ರಲ್ಲಿ ಮಂಜೂರಾಗಿತ್ತು. ಆದರೆ ಅದರ ದಾಖಲೆ ಪತ್ರಗಳು ಇನ್ನೂ ಅವರ ಕೈಗೆ ಸಿಕ್ಕಿಲ್ಲ. ಹೀಗಾಗಿ ಅರೆ ಸಮಾಧಿಯಾಗಿ ಪ್ರತಿಭಟನೆ ಮಾಡಿದ್ದಾರೆ.

ADVERTISEMENT

ಅಲ್ಲದೇ ತನ್ನ ಕೆಲಸ ಆಗುವವರೆಗೆ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ರೈತ ಪಟ್ಟು ಹಿಡಿದಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಲಿ ಜಾಗವೊಂದರಲ್ಲಿ ವ್ಯಕ್ತಿ ಕತ್ತಿನವರೆಗೆ ತನ್ನನ್ನು ತಾನು ಸಮಾಧಿ ಮಾಡಿಕೊಂಡಿದ್ದು, ಅವರ ಪಕ್ಕದಲ್ಲೇ ಒಂದು ಮಗು ಹಾಗೂ ಮಹಿಳೆ ಇರುವುದು ವಿಡಿಯೋದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.