ADVERTISEMENT

ಶ್ರೀನಗರ| ಗಣರಾಜ್ಯೋತ್ಸವಕ್ಕೂ ಮುನ್ನ ತಪ್ಪಿದೆ ಉಗ್ರ ದಾಳಿ

ಪಿಟಿಐ
Published 16 ಜನವರಿ 2020, 13:36 IST
Last Updated 16 ಜನವರಿ 2020, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆಸಲು ಉದ್ದೇಶಿಸಲಾಗಿದ್ದಭಾರಿಭಯೋತ್ಪಾದಕ ಕೃತ್ಯವೊಂದನ್ನುಜಮ್ಮು ಮತ್ತು ಕಾಶ್ಮೀರ ಪೊಲೀಸರು ತಪ್ಪಿಸಿದ್ದಾರೆ.

ಮಸೂದ್‌ ಅಜರ್‌ ನೇತೃತ್ವದ ಜೈಷ್‌ ಎ ಮೊಹಮ್ಮದ್‌(ಜೆಇಎಂ)ಉಗ್ರ ಸಂಘಟನೆ ರೂಪಿಸಿದ್ದ ದಾಳಿ ಮಾದರಿಯನ್ನುಪೊಲೀಸರು ಧ್ವಂಸಗೊಳಿಸಿದ್ದು, ಐವರು ಉಗ್ರರನ್ನು ಬಂಧಿಸಿದ್ದಾರೆ.

‘ಬಂಧಿತ ಉಗ್ರರಿಂದ ಭಾರಿ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಇದೊಂದು ಪ್ರಮುಖ ಗೆಲುವುವಾಗಿದೆ. ಹಜರತ್‌ಬಲ್‌ನಲ್ಲಿ ಎರಡು ಗ್ರನೇಡ್‌ ದಾಳಿಯ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಗಣರಾಜ್ಯೋತ್ಸವದ ಮುನ್ನ ದಿನಗಳಲ್ಲಿ ಭಾರಿ ದುರಂತವೊಂದು ತಪ್ಪಿದಂತಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ಟೀಟ್‌ ಮಾಡಿದ್ದಾರೆ.

ಐಜಾಜ್ ಅಹಮ್ಮದ್ ಶೇಖ್, ಉಮರ್‌ ಹಮೀದ್‌ ಶೇಖ್‌, ಇಂತಿಯಾಜ್ ಅಹಮ್ಮದ್ ಚಿಕ್ಲಾ, ಸಾಹಿಲ್‌ ಫಾರೂಕ್, ನಸೀರ್‌ ಅಹಮ್ಮದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.